Advertisement

ಮರಳಿ ಗೂಡು ಸೇರಿದ ಅಂಧ ಮಕ್ಕಳು

11:36 AM Oct 06, 2019 | Team Udayavani |

ಹುಬ್ಬಳ್ಳಿ: ಅತಿವೃಷ್ಟಿ-ಪ್ರವಾಹದಿಂದ ವಸತಿ ಶಾಲೆ ಜಲಾವೃತಗೊಂಡು ಹುಬ್ಬಳ್ಳಿಯಲ್ಲಿ ನೆಲೆ ಕಂಡಿದ್ದ 45 ಅಂಧ ಮಕ್ಕಳು ಮರಳಿ ಗೂಡು ಸೇರಿದ್ದಾರೆ.

Advertisement

ಕಳೆದ ತಿಂಗಳು ಸುರಿದ ಭಾರಿ ಮಳೆ ಹಾಗೂ ಪ್ರವಾಹದಿಂದ ರೋಣ ತಾಲೂಕಿನ ಹೊಳೆಆಲೂರಿನಲ್ಲಿರುವ ಜ್ಞಾನಸಿಂಧು ಅಂಧ ಮಕ್ಕಳ ವಸತಿ ಪ್ರಾಥಮಿಕ ಶಾಲೆ ಸಂಪೂರ್ಣವಾಗಿ ಜಲಾವೃತಗೊಂಡಿತ್ತು. ಅಲ್ಲಿನ ಸುಮಾರು 45 ಜನ ಅಂಧ ವಿದ್ಯಾರ್ಥಿಗಳು ಹುಬ್ಬಳ್ಳಿಗೆ ಆಗಮಿಸಿದ್ದರು.

ಕಳೆದ ಒಂದೂವರೆ ತಿಂಗಳಿಂದ ಇಲ್ಲಿಯೇ ಉಳಿದುಕೊಂಡಿದ್ದ ಮಕ್ಕಳು ಶನಿವಾರದಿಂದ ದಸರಾ ರಜೆ ಇರುವುದರಿಂದ ತಮ್ಮ ತಮ್ಮ ಮನೆಗಳಿಗೆ ತೆರಳಿದರು. ಅ. 21ರಂದು ಹೊಳೆಆಲೂರಿನ ಶಾಲೆಗೆ ಮರಳಿ ಆಗಮಿಸಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next