Advertisement

ಕರಿಯಂಗಳ: 36. 78 ಲ.ರೂ. ಮೌಲ್ಯದ ಮರಳು ವಶಕ್ಕೆ

11:20 AM Nov 26, 2017 | |

ಬಂಟ್ವಾಳ: ಕರಿಯಂಗಳ ಗ್ರಾಮದ ಪುಂಚಮೆ ಪಲ್ಲಿಪಾಡಿಯಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು, ಕಂದಾಯ ಇಲಾಖೆ ಮತ್ತು ಪೊಲೀಸರು ನ. 24ರಂದು ಸಂಜೆ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಲಕ್ಷಾಂತರ ಮೌಲ್ಯದ ಮರಳು, ಒಂದು ಹಿಟಾಚಿ, ಲಾರಿ, ದೋಣಿಯನ್ನು ವಶಕ್ಕೆ ಪಡೆಯಲಾಗಿದೆ.

Advertisement

ದಾಳಿ ನಡೆಯುತ್ತಿದ್ದಂತೆ ಸ್ಥಳದಲ್ಲಿದ್ದ ಲಾರಿ ಚಾಲಕರು, ಹಿಟಾಚಿ ಚಾಲಕ, ಕಾರ್ಮಿಕರು ಪರಾರಿಯಾಗಿದ್ದಾರೆ. ಸುಮಾರು 150ಕ್ಕೂ ಅಧಿಕ ಲೋಡ್‌ ಮರಳನ್ನು ಸ್ಥಳದಲ್ಲಿ ಸಂಗ್ರಹಿಸಿಡಲಾಗಿತ್ತು. ಮರಳು ಸಹಿತ ವಶಪಡಿಸಿಕೊಂಡ ಸೊತ್ತುಗಳ ಮೌಲ್ಯ 36.78ಲ.ರೂ. ಎಂದು ಅಂದಾಜಿಸಿದೆ. ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗಣಿ ಇಲಾಖೆ ಅಧಿಕಾರಿ ಮೂರ್ತಿ ಬಿ.ಕೆ., ಚಾಲಕ ಕೇಶವ, ಗ್ರಾಮಾಂತರ ಎಸ್‌ಐ ಪ್ರಸನ್ನ ಕುಮಾರ್‌, ಸಿಬಂದಿ ಜನಾರ್ದನ, ಕಂದಾಯ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next