Advertisement

JDS: ಬ್ಲಾಕ್‌ಮೇಲ್‌ ರಾಜಕಾರಣಕ್ಕೆ ಹೆದರುವುದಿಲ್ಲ: ಎಚ್‌.ಡಿ.ರೇವಣ್ಣ

09:59 PM Jan 13, 2024 | Team Udayavani |

ಹಾಸನ: ನಾಲ್ಕು ದಶಕಗಳಿಂದ ರಾಜಕಾರಣದಲ್ಲಿರುವ ನಾನು ಮತ್ತು ನಮ್ಮ ಕುಟುಂಬ, ಸರಕಾರಕ್ಕೆ ಅಥವಾ ಬಡವರಿಗೆ ಅನ್ಯಾಯ ಮಾಡಿದ್ದರೆ ಯಾವುದೇ ತನಿಖೆ ಎದುರಿಸಲೂ ಸಿದ್ಧ. ಆದರೆ ಬ್ಲ್ಯಾಕ್‌ವೆುಲ್‌ ರಾಜಕಾರಣಕ್ಕೆ ಹೆದರುವುದಿಲ್ಲ. ತೇಜೋವಧೆ ಮಾಡುವವರಿಗೆ ಕಾನೂನು ಕ್ರಮದ ಮೂಲಕವೇ ಉತ್ತರ ನೀಡುವೆ ಎಂದು ಮಾಜಿ ಸಚಿವ ಎಚ್‌.ಡಿ.ರೇವಣ್ಣ ಎಚ್ಚರಿಕೆ ನೀಡಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಲವರಿಗೆ ಬ್ಲ್ಯಾಕ್‌ವೆುಲ್‌ ರಾಜಕೀಯ ಮಾಡುವುದೇ ವೃತ್ತಿಯಾಗಿದೆ. ಕಳೆದ ನಾಲ್ಕು ವರ್ಷಗಳಿಂದ ಸಂಸದ ಪ್ರಜ್ವಲ್‌ಗೆ ಕೊಡಬಾರದ ತೊಂದರೆ ಕೊಡುತ್ತಿದ್ದಾರೆ. ಬ್ಲ್ಯಾಕ್‌ವೆುಲ್‌ ಮಾಡುವುದನ್ನೇ ಕಸುಬು ಮಾಡಿಕೊಂಡಿರುವವರೊಂದಿಗೆ ಹಾಸನ ಜಿಲ್ಲೆಯ ಮತ್ತು ರಾಜ್ಯದ ಕೆಲವರು ಕೈಜೋಡಿಸಿದ್ದಾರೆ. ಬ್ಲ್ಯಾಕ್‌ವೆುಲ್‌ ತಂತ್ರಗಳಿಂದ ದೇವೇಗೌಡರ ಕುಟುಂಬವನ್ನು ಮುಗಿಸುತ್ತೇವೆ ಎಂದು ಕೊಂಡಿದ್ದರೆ ಅದು ಸಾಧ್ಯವಿಲ್ಲ. ಜನರು ಹಾಗೂ ದೇವರು ನಮ್ಮ ಪರವಾಗಿರುವ ವರೆಗೆ ನಮ್ಮನ್ನು ಏನೂ ಮಾಡಲಾಗದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next