Advertisement

ಕಪ್ಪು ಹಣ ತರಲು ವಿಫ‌ಲ: ದೀದಿ

03:45 AM Jan 12, 2019 | Harsha Rao |

ಕೋಲ್ಕತಾ: ದೇಶಾದ್ಯಂತ ಗೂಂಡಾಗಳು ತಿರುಗಾಡುತ್ತಿದ್ದಾರೆ. ವಿದೇಶಗಳಲ್ಲಿರುವ ಕಪ್ಪುಹಣ ತರಲು ವಿಫ‌ಲರಾಗಿದ್ದಾರೆ ಎಂದು ಪರೋಕ್ಷವಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ವಿರುದ್ಧ ಪಶ್ಚಿಮ ಬಂಗಾಲ ಸಿಎಂ ಮಮತಾ ಬ್ಯಾನರ್ಜಿ ಟೀಕಾ ಪ್ರಹಾರ ನಡೆಸಿದ್ದಾರೆ. ಕೋಲ್ಕತಾದಲ್ಲಿನ ದುರ್ಗಾ ಪೂಜಾ ಪಂಡಾಲ್‌ಗ‌ಳಿಗೆ ತೆರಿಗೆ ಪಾವತಿಸಿ ಎಂದು ಆದಾಯ ತೆರಿಗೆ ಇಲಾಖೆ ನೋಟಿಸ್‌ ಕಳುಹಿಸಿದೆ. ತಿರುಪತಿ, ಪುರಿ ಜಗನ್ನಾಥ ದೇಗುಲ, ಅಮೃತಸರದ ಸ್ವರ್ಣ ಮಂದಿರ, ಮುಂಬಯಿ ಸಿದ್ಧಿ ವಿನಾಯಕ ಮಂದಿರ, ಅಜ್ಮಿàರ್‌ನ ದರ್ಗಾ ಷರೀಫ್ಗೆ ಆದಾಯದ ಮೂಲದಲ್ಲಿಯೇ  ತೆರಿಗೆ ಕಡಿತ (ಟಿಡಿಎಸ್‌) ಮಾಡಲಾಗುತ್ತದೆಯೇ ಎಂದು ಮುಖ್ಯಮಂತ್ರಿ ಪ್ರಶ್ನಿಸಿದ್ದಾರೆ. ದೇಶದ ರೈತರ ಆತ್ಮಹತ್ಯೆ ಬಗ್ಗೆ ಮೌನ ವಹಿಸಿರುವವರು ದುರ್ಗಾ ಪೂಜಾ ಸಮಿತಿಗಳಿಗೆ ತೆರಿಗೆ ನೋಟಿಸ್‌ ನೀಡಿದ್ದಾರೆ. ಅದಕ್ಕೆ ಲಕ್ಷ್ಯವೇ ಕೊಡಬೇಡಿ ಎಂದು ದುರ್ಗಾ ಪೂಜಾ ಸಮಿತಿಗಳಿಗೆ ದೀದಿ ಸೂಚಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next