Advertisement

ಮನೆ ಮುಂದೆ ಮಾಟ !:ಕೈ ನಾಯಕಿ ಲಕ್ಷ್ಮೀ ಹೆಬ್ಬಾಳ್ಕರ್‌ ಕಂಗಾಲು 

10:52 AM Apr 20, 2017 | Team Udayavani |

ಬೆಳಗಾವಿ : ಕೆಪಿಸಿಸಿ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಲಕ್ಷ್ಮೀ ಹೆಬ್ಬಾಳ್ಕರ್‌ ಅವರ ನಿವಾಸದ ಎದುರು ಮಾಟ ಮಂತ್ರ ಮಾಡಿರುವುದು ಗುರುವಾರ ಬೆಳಗ್ಗೆ ಕಂಡು ಬಂದಿದೆ. 

Advertisement

ಕುವೆಂಪುನಗರದ ನಿವಾಸದ ಎದುರು ನಿಲ್ಲಿಸಿದ್ದ ಕಾರಿನ ಅಡಿಯಲ್ಲಿ ಮಾಟ ಮಂತ್ರಕ್ಕೆ ಬಳಸುವ ಲಿಂಬೆ  , ಮೊಟ್ಟೆ ,ಮೆಣಸಿನಕಾಯಿ ಬೂದು ಗುಂಬಳಕಾಯಿ ಅರಸಿನ ಕುಂಕುಮ ಇತ್ಯಾದಿ ವಸ್ತುಗಳು ಪತ್ತೆಯಾಗಿದೆ. 

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಲಕ್ಷ್ಮೀ ಹೆಬ್ಬಾಳ್ಕರ್‌ ‘ನಾನು ಮಾಟ,ಮಂತ್ರ ನಂಬುವುದಿಲ್ಲ. ರಾಜಕೀಯ ವಿರೋಧಿಗಳು ಇದನ್ನು ಮಾಡಿದ್ದಾರೆ. ಕಳೆದ ವಿಧಾನ ಸಭಾ ಚುನಾವಣೆ ನಡೆದ ಬಳಿಕ ಈ ರೀತಿ ಮಾಡುತ್ತಿದ್ದಾರೆ. ಯಾವ ಉದ್ದೇಶಕ್ಕಾಗಿ ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದ ಅವರು ನನ್ನ ತಮ್ಮನ ಕಾರು ಅಪಘಾತಕ್ಕೀಡಾಗಿದೆ. ಅದಾಗಿ 2 ದಿನಗಳಲ್ಲಿ ನನ್ನ ಇನ್ನೋವಾ ಕಾರು ಅಪಘಾತಕ್ಕೀಡಾಗಿ ಕೆಲವರಿಗೆ ಗಾಯವಾಗಿದೆ. ನನ್ನ ಮಗನೂ ಬಿದ್ದು ಗಾಯಗೊಂಡಿದ್ದಾನೆ. ಈ ಎಲ್ಲಾ ಘಟನೆಗಳಿಂದ ನಮ್ಮ ಮನೆಯವರಿಗೆಲ್ಲಾ ಸಂಶಯ ಮೂಡಿದೆ ಎಂದರು. 

ಪಿಎಸ್‌ಐಗೆ ಧಮ್ಕಿ, ನಿವಾಸದ ಮೇಲೆ ಐಟಿ ದಾಳಿ,ಉಪಚುನಾವಣೆ ವೇಳೆ ಮತದಾರರಿಗೆ ಹಣ ಹಂಚಿದ ಆರೋಪ ಹೀಗೆ ಸದಾ ಒಂದಿಲ್ಲ ಒಂದು ವಿಚಾರದಲ್ಲಿ ಹೆಬ್ಬಾಳ್ಕರ್‌ ಸುದ್ದಿಯಲ್ಲಿರುತ್ತಾರೆ. 

Advertisement

Udayavani is now on Telegram. Click here to join our channel and stay updated with the latest news.

Next