Advertisement

ಬಿಜೆಪಿಯ ಜನಪರ ಕೆಲಸಕ್ಕೆ ಸಿಕ್ಕ ಜನಮನ್ನಣೆ

12:41 PM Mar 12, 2017 | Team Udayavani |

ಹರಪನಹಳ್ಳಿ: ಪಂಚ ರಾಜ್ಯಗಳ ಚುನಾವಣೆ ಫಲಿತಾಂಶದಲ್ಲಿ ಉತ್ತರ ಪ್ರದೇಶ, ಉತ್ತರಾಖಂಡ, ಮಣಿಪುರ ರಾಜ್ಯಗಳಲ್ಲಿ ಬಿಜೆಪಿಗೆ ಹೆಚ್ಚಿನ ಸ್ಥಾನ ಪಡೆದಿದ್ದಕ್ಕೆ ಪಟ್ಟಣದ ಇಜಾರಿ ಶಿರಸಪ್ಪ ವೃತ್ತದಲ್ಲಿ ಶನಿವಾರ ಬಿಜೆಪಿ ಪಕ್ಷದ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.

Advertisement

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಜನರ ಕೆಲಸಗಳನ್ನು ಮೆಚ್ಚಿಕೊಂಡಿರುವ ಜನರು ಬಿಜೆಪಿಗೆ ಅಧಿಧಿಕಾರ ನೀಡಿದ್ದಾರೆ. ದೇಶದ ರಕ್ಷಣೆ, ಕಪ್ಪುಹಣದ ವಿರುದ್ಧ ಸಮರ ಸಾರಿರುವ  ಪ್ರಧಾನಿಗಳು 500, 1000ರೂ ಮುಖ ಬೆಲೆಯ ನೋಟು ಗಳನ್ನು ಅಮಾನ್ಯ ಮಾಡುವ ಮೂಲಕ ಮೂಲಕಭ್ರಷ್ಟರಿಗೆ ಸಿಂಹ ಸ್ವಪ್ನವಾಗಿದ್ದಾರೆ. ಬಿ

ಜೆಪಿಯ ಜನರ ಕೆಲಸಗಳನ್ನು ಬೆಂಬಲಿ ಸುವುದು ಸಂತೋಷದ ವಿಷಯ ಎಂದು ಸಂಭ್ರಮಿಸಿದರು. ಪುರಸಭಾಧ್ಯಕ್ಷ ಎಚ್‌.ಕೆ.ಹಾಲೇಶ್‌,  ಬಿಜೆಪಿ ತಾಲೂಕು ಘಟಕದ ಅಧ್ಯಕ್ಷಕೆ.ಲಕ್ಷ ಣ್‌, ಉಪಾಧ್ಯಕ್ಷ ಕಣವಿಹಳ್ಳಿ ಮಂಜುನಾಥ್‌, ಕಾರ್ಯದರ್ಶಿ ಎಸ್‌ .ಪಿ.ಲಿಂಬ್ಯಾನಾಯ್ಕ,

ಮುಖಂಡರಾದ ಎಂ.ಪಿ.ನಾಯ್ಕ, ಸಣ್ಣಹಾಲಪ್ಪ, ಲೋಕೇಶ್‌, ಬಾಗಳಿ ಕೋಟ್ರಪ್ಪ, ರೇವಣ್ಣ, ಬಿ.ವೈ.ವೆಂಕಟೇಶನಾಯ್ಕ, ಸತ್ತೂರು ಹಾಲೇಶ್‌, ಬೂದಿ ನವೀನ್‌, ಪ್ರಕಾಶ್‌, ರಾಘವೇಂದ್ರಶೆಟ್ಟಿ, ಕಣವಿಹಳ್ಳಿ ಗಂಗವ್ವ, ಭಂಗಿ ಕೆಂಚಪ್ಪ, ಸಂತೋಷ್‌ ಮತ್ತಿತರರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next