Advertisement

ವಿದ್ಯುತ್‌ ಬೆಲೆ ಏರಿಕೆಗೆ ಬಿಜೆಪಿ ಕೈಗಾರಿಕಾ ಪ್ರಕೋಷ್ಠ ವಿರೋಧ

11:40 AM Apr 14, 2017 | |

ಪಡುಬಿದ್ರಿ: ಪ್ರಸ್ತಾವಿತ ವಿದ್ಯುತ್‌ ಬೆಲೆ ಏರಿಸುವ ರಾಜ್ಯ ಸರಕಾರದ ನಿರ್ಧಾರಕ್ಕೆ ಉಡುಪಿ ಜಿಲ್ಲಾ ಬಿಜೆಪಿ ಕೈಗಾರಿಕಾ ಪ್ರಕೋಷ್ಠ ತೀವ್ರ ವಿರೋಧ ವ್ಯಕ್ತಪಡಿಸಿದೆ.

Advertisement

ಈಗಾಗಲೇ ಅನಿಯಮಿತ ವಿದ್ಯುತ್‌ ಕಡಿತ, ತೆರಿಗೆಗಳ ಹಾವಳಿ, ಕಾರ್ಮಿಕರ ಸಮಸ್ಯೆ, ನೀರಿನ ಅಭಾವದಿಂದ ಕಂಗೆಟ್ಟಿರುವ ಕೈಗಾರಿಕಾ ವಲಯಕ್ಕೆ ದರ ಏರಿಕೆ ನಿರ್ಧಾರ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಜಿಲ್ಲಾ ಕೈಗಾರಿಕಾ ಪ್ರಕೋಷ್ಟದ ಸಂಚಾಲಕ ಇನ್ನ ಉದಯಕುಮಾರ್‌ ಶೆಟ್ಟಿ ಹೇಳಿದ್ದಾರೆ.

ಉಡುಪಿ ಜಿಲ್ಲೆಯಲ್ಲಿ ಮೆಸ್ಕಾಂನ ಶೇ. 100 ವಿದ್ಯುತ್‌ ಬಿಲ್‌ ವಸೂಲಾಗುತ್ತಿದ್ದು, ಮತ್ತೂಂದೆಡೆ ವಿದ್ಯುತ್‌ ಉತ್ಪಾದಿಸುವ ಜಿಲ್ಲೆಯೂ ಆಗಿದೆ. ಇಲ್ಲಿ ಇತರ ಜಿಲ್ಲೆಗಳಷ್ಟು ವಿದ್ಯುತ್‌ ವಿತರಣೆ ಹಾಗೂ ಸಾಗಾಟದ ವೆಚ್ಚಇರುವುದಿಲ್ಲ. ಹಾಗಿದ್ದರೂ ರಾಜ್ಯದಇತರೆಡೆ ಎಸ್ಕಾಂಗಳ ನಷ್ಟ ಭರಿಸಲು ಉಡುಪಿ ಜಿಲ್ಲೆಯ ಜನತೆ ಮೇಲೂ ವಿದ್ಯುತ್‌ ದರ ಏರಿಕೆ ಹೊರೆ ಹೊರಿಸಲು ಹೊರಟಿರುವ ರಾಜ್ಯದ ಕಾಂಗ್ರೆಸ್‌ ಸರಕಾರ ಜಿಲ್ಲೆಯ ಜನತೆಯ ಪಾವತಿಯ ನಿಷ್ಠೆ, ದಕ್ಷತೆ ಕಡೆಗಣಿಸಿದೆ ಎಂದೂ ಇನ್ನ ಉದಯಕುಮಾರ್‌ ಶೆಟ್ಟಿ ತಿಳಿಸಿದ್ದಾರೆ.  

Advertisement

Udayavani is now on Telegram. Click here to join our channel and stay updated with the latest news.

Next