Advertisement

ಪಕ್ಷಕ್ಕಿಂತ ದೇಶವೇ ಮೊದಲು ಬಿಜೆಪಿ ಸಿದ್ದಾಂತ: ಪಟ್ಟಣಶೆಟ್ಟಿ

05:31 PM Dec 22, 2021 | Shwetha M |

ವಿಜಯಪುರ: ದೇಶದ ಸಮಗ್ರತೆಗೆ ಬಗ್ಗೆ ಚಿಂತನೆ ನಡೆಸುವ ಏಕೈಕ ಪಕ್ಷ ಬಿಜೆಪಿ ಮಾತ್ರ ಭಾರತೀಯರಿಗೆ ಆಡಳಿತ ನೀಡಲು ಸೂಕ್ತ. ಕಾರ್ಯಕರ್ತರ ಆಧಾರಿತ ರಾಷ್ಟ್ರೀಯ ಅತಿ ದೊಡ್ಡ ಪಕ್ಷವಾಗಿರುವ ಬಿಜೆಪಿ ಮಾತ್ರವೇ ದೇಶಕ್ಕೆ ಸುಭದ್ರ ಸರ್ಕಾರ ನೀಡಲು ಸಾಧ್ಯ ಎಂದು ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಹೇಳಿದರು.

Advertisement

ನಗರದ ಗ್ಯಾಂಗ್‌ ಬಾವಡಿ ಪ್ರದೇಶದಲ್ಲಿ ಹಮ್ಮಿಕೊಂಡಿದ್ದ ಬಿಜೆಪಿ ವಿಜಯಪುರ ನಗರ ಮಂಡಳದ ಪ್ರಮುಖರ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿ ಕಾರ್ಯಕರ್ತರಿಗೆ ವ್ಯಕ್ತಿಗಿಂತ ಪಕ್ಷ ದೊಡ್ಡದು, ಪಕ್ಷಕ್ಕಿಂತ ದೇಶ ದೊಡ್ಡದು ಹಾಗೂ ದೇಶವೇ ಮೊದಲು ಎಂಬ ಸಿದ್ಧಾಂತವೇ ಪಕ್ಷದ ಜೀವಾಳ ಎಂದರು.

ದೇಶ ಮೊದಲು ನಂತರ ನಾವು ಎಂಬ ಸಿದ್ಧಾಂತದ ಕಾರಣದಿಂದಲೇ ದೇಶದ ಎಲ್ಲೆಡೆ ಜನರು ಬಿಜೆಪಿ ಹಾಗೂ ಕಾಯಕರ್ತರ ಮೇಲೆ ವಿಶ್ವಾಸ ಇರಿಸಿ, ಪ್ರೀತಿ ತೋರುತ್ತಿದ್ದಾರೆ. ಹೀಗಾಗಿ ದೇಶದ ಜನರ ಆಶಯದಂತೆ ಪಕ್ಷದ ಕಾರ್ಯಕರ್ತರು ನಿರಂತರ ಪಕ್ಷದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ನಗರ ಮಂಡಳ ಅಧ್ಯಕ್ಷ ಮಳುಗೌಡ, ಬಿಜೆಪಿ ಬೆಳಗಾವಿ ವಿಭಾಗೀಯ ಸಂಘಟನಾ ಕಾರ್ಯದರ್ಶಿ ಪ್ರಕಾಶ ಅಕ್ಕಲಕೋಟ, ಸಂಘಟನಾತ್ಮಕ ವಿಷಯಗಳ ಕುರಿತು ಮಾತನಾಡಿದರು.

ಒಬಿಸಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ವಿವೇಕಾನಂದ ಡಬ್ಬಿ, ಬಿಜೆಪಿ ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಗೋಪಾಲ ಘಟಕಾಂಬಳೆ, ಭೀಮಾಶಂಕರ ಹದನೂರ, ಪಾಪುಸಿಂಗ್‌ ರಜಪೂತ, ಉಮೇಶ ವಂದಾಲ, ಭಾರತಿ ಭುಂಯ್ನಾರ, ಲಕ್ಷ್ಮೀ ಕನ್ನೊಳ್ಳಿ, ವಿಜಯ ಜೋಶಿ, ರಾಕೇಶ ಕುಲಕರ್ಣಿ, ರಾಜೇಂದ್ರ ವಾಲಿ, ವಿನಾಯಕ ದಹಿಂಡೆ, ಗುರು ಗಚ್ಚಿನಮಠ, ರಾಜೇಶ ತವಸೆ, ಸೋಮು ಮಠ, ಕಾಂತು ಸಿಂಧೆ, ಅಲ್ತಾಫ್‌ ಇಟಗಿ, ಸತೀಶ ಪಾಟೀಲ, ಸಂದೀಪ ಪಾಟೀಲ, ರಾಜಶೇಖರ ತಾಳಿಕೋಟಿ, ಶಬೀನಾ ಚಬನೂರ, ಸತೀಶ ಡೋಬಳೆ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next