Advertisement

ರಾಹುಲ್‌ ಕಾರಿಗೆ ಕಲ್ಲು: ಬಿಜೆಪಿ ಯುವ ನಾಯಕನ ಬಂಧನ

06:10 AM Aug 06, 2017 | Team Udayavani |

ಹೊಸದಿಲ್ಲಿ /ಬನಸ್ಕಾಂತಾ: ಗುಜರಾತ್‌ನ ಧನೇರಾದಲ್ಲಿ ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರ ಕಾರಿಗೆ ಕಲ್ಲೆಸೆದ ಆರೋಪಕ್ಕೆ ಸಂಬಂಧಿಸಿ ಶನಿವಾರ ಪೊಲೀಸರು ಬನಸ್ಕಾಂತಾದ ಬಿಜೆಪಿ ಯುವಘಟಕದ ಪ್ರಧಾನ ಕಾರ್ಯದರ್ಶಿ ಜಯೇಶ್‌ ದರ್ಜಿ ಎಂಬಾತನನ್ನು ಬಂಧಿಸಿದ್ದಾರೆ.

Advertisement

ಘಟನೆಗೆ ಬಿಜೆಪಿ ಮತ್ತು ಆರೆಸ್ಸೆಸ್‌ ಕಾರಣ ಎಂದು ಕಾಂಗ್ರೆಸ್‌ ಆರೋಪಿಸಿದ ಕೆಲವೇ ಗಂಟೆಗಳಲ್ಲಿ ದರ್ಜಿಯನ್ನು ವಶಕ್ಕೆ ಪಡೆಯಲಾಗಿದೆ. ದಾಳಿ ಕುರಿತು ಶನಿವಾರ ಪ್ರತಿಕ್ರಿಯಿಸಿದ ರಾಹುಲ್‌, “ಒಬ್ಬ ಬಿಜೆಪಿ ಕಾರ್ಯಕರ್ತ ದೊಡ್ಡ ಕಲ್ಲೊಂದನ್ನು ಕೈಯಲ್ಲಿ ಹಿಡಿದುಕೊಂಡು ನನ್ನತ್ತ ಓಡಿ ಬಂದು ಎಸೆದ. ಅದು ನನ್ನ ಖಾಸಗಿ ಭದ್ರತಾ ಅಧಿಕಾರಿ (ಪಿಎಸ್‌ಒ)ಗೆ ತಾಗಿತು. ಇದು ಮೋದಿ, ಬಿಜೆಪಿ ಮತ್ತು ಆರೆಸ್ಸೆಸ್‌ ಮಾಡುವಂಥ ರಾಜಕೀಯ. ಇದಕ್ಕಿಂತ ಹೆಚ್ಚಿನದ್ದನ್ನು ನಾನೇನೂ ಹೇಳಲಾರೆ. ಅವರೇ (ಬಿಜೆಪಿ) ಇದರ ಹಿಂದೆ ಇರುವಾಗ ಘಟನೆಯನ್ನು ಅವರೇಕೆ ಖಂಡಿಸುತ್ತಾರೆ’ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ, ತಮ್ಮ ವಿರುದ್ಧದ ದಾಳಿಯನ್ನು ಖಂಡಿಸಿ ಯಾರೂ ಪ್ರತಿಭಟನೆ ನಡೆಸಬೇಡಿ. ಅದರ ಬದಲಿಗೆ ಪ್ರವಾಹಪೀಡಿತ ಜನರ ನೆರವಿಗೆ ಧಾವಿಸಿ ಎಂದು ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.

ರಾಹುಲ್‌ ಗಾಂಧಿ ಅವರ ಮೇಲೆ ನಡೆದ ದಾಳಿಯನ್ನು ಬಿಜೆಪಿಯ ಒಬ್ಬ ರಾಷ್ಟ್ರೀಯ ನಾಯಕನೂ ಖಂಡಿಸುತ್ತಿಲ್ಲ ಏಕೆ? ನಿಂದನೆ, ಸುಳ್ಳು ಆರೋಪ, ಹಿಂಸೆಯಿಂದ ನೀವು (ಬಿಜೆಪಿ) ಕಾಂಗ್ರೆಸ್‌ ಮುಕ್ತ ಭಾರತದ ಗುರಿ ಸಾಧಿಸಬಹುದು ಎಂದು ಅಂದುಕೊಂಡಿದ್ದರೆ ಅದು ನಿಮ್ಮ ತಪ್ಪು ಕಲ್ಪನೆ. 
– ಪಿ. ಚಿದಂಬರಂ, ಕೇಂದ್ರದ ಮಾಜಿ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next