Advertisement

ಡಿ.ಕೆ.ಸುರೇಶ್ ವಿರುದ್ದ ಶ್ರೀರಂಗಪಟ್ಟಣದಲ್ಲಿ ಪ್ರತಿಭಟನೆ

04:11 PM Jan 04, 2022 | Team Udayavani |

ಶ್ರೀರಂಗಪಟ್ಟಣದಲ್ಲಿ : ನಿನ್ನೆ ರಾಮನಗರದಲ್ಲಿ ಸಚಿವ ಅಶ್ವಥ ನಾರಾಯಣ್ ಬಳಿ ಸಂಸದ ಸುರೇಶ್ ಗೂಂಡಾ ವರ್ತನೆ ನಡೆಸಿರೋದನ್ನು‌ ಖಂಡಿಸಿ ಶ್ರೀರಂಗಪಟ್ಟಣದಲ್ಲಿ ಇಂದು ತಾಲೂಕು ಬಿಜೆಪಿ ಘಟಕದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

Advertisement

ಶ್ರೀರಂಗಪಟ್ಟಣ  ಟೌನ್ ಬಿಜೆಪಿ ಅಧ್ಯಕ್ಷ ಹೇಮಂತ್ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು, ಪಟ್ಟಣದ ಕುವೆಂಪು ವೃತ್ತದ ಬಳಿ ಮೈ- ಬೆಂ ಹೆದ್ದಾರಿ ತಡೆ ದು ಗೂಂಡಾ ವರ್ತನೆ ತೋರಿರೋ ಡಿಕೆ ಸುರೇಶ್ ವಿರುದ್ದ  ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿ ಕೂಡಲೇ ಸಂಸದ ಡಿ.ಕೆ.ಸುರೇಶ್ ಕ್ಷಮೆ ಯಾಚಿಸುವಂತೆ ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಬಿಜೆಪಿ ಟೌನ್ ಅಧ್ಯಕ್ಷ ಹೇಂಮತ್, ಮಹದೇವಪುರ ವಿನಯ್ ಬಲ್ಲೇನಹಳ್ಳಿ ಕೃಷ್ಣೇಗೌಡ,ಉಂಡುವಾಡಿ ಮಹದೇವು ಸೇರಿದಂತೆ ಹಲವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next