Advertisement

ಪ.ಬಂಗಾಲದಲ್ಲಿ ಬಿಜೆಪಿ ಕಾರ್ಯಕರ್ತನ ಹತ್ಯೆ

12:30 AM May 28, 2019 | Team Udayavani |

ಚುನಾವಣೆ ಫ‌ಲಿತಾಂಶ ಬಂದ ಬಳಿಕವೂ ದೇಶದ ಹಲವೆಡೆ ರಾಜಕೀಯ ಹತ್ಯೆಗಳ ಸರಣಿ ಮುಂದುವರಿದಿದೆ. ಅಮೇಠಿಯಲ್ಲಿ ಸಂಸದೆ ಸ್ಮತಿ ಇರಾನಿ ಅವರ ಆಪ್ತನ ಕೊಲೆಯಾದ ಬೆನ್ನಲ್ಲೇ ಪಶ್ಚಿಮ ಬಂಗಾಲದಲ್ಲಿ ರವಿವಾರ ರಾತ್ರಿ ಮತ್ತೂಬ್ಬ ಬಿಜೆಪಿ ಕಾರ್ಯಕರ್ತನ ಹತ್ಯೆ ನಡೆದಿದೆ. ನಾರ್ತ್‌ 24 ಪರಗಣ ಜಿಲ್ಲೆಯಲ್ಲಿ 24 ವರ್ಷದ ಚಂದನ್‌ ಶಾ ಎಂಬಾತನನ್ನು ಗುಂಡಿಕ್ಕಿ ಹತ್ಯೆಗೈಯ್ಯಲಾಗಿದೆ. ರವಿವಾರ ಅರಣ್ಯ ಸಚಿವ ಬಿನಯ್‌ ಕೃಷ್ಣ ಬರ್ಮನ್‌ ಅವರ ಬೆಂಗಾವಲು ವಾಹನಗಳ ಮೇಲೆ ದಾಳಿಯೂ ನಡೆದಿದೆ. ಈ ನಡುವೆ, ಉತ್ತರಪ್ರದೇಶದಲ್ಲಿ ಎಸ್‌ಪಿ ನಾಯಕ, ಮಾಜಿ ಸಂಸದ ಕಮಲೇಶ್‌ ಬಾಲ್ಮೀಕಿ ಎಂಬವರ ಮೃತದೇಹ ಅವರ ಮನೆಯಲ್ಲೇ ಪತ್ತೆಯಾಗಿದ್ದು, ಇವರ ಸಾವಿನ ಸುತ್ತ ಹಲವು ಸಂಶಯಗಳು ಎದ್ದಿವೆ. ಕಮಲೇಶ್‌ರನ್ನು ಯಾರೋ ವಿಷವಿಕ್ಕಿ ಕೊಲೆಗೈದಿರುವ ಶಂಕೆಯಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next