Advertisement

ಬಿಜೆಪಿ ಗೆಲುವು : ಮೂಲ್ಕಿಯಲ್ಲಿ ಸಂಭ್ರಮ

05:12 PM Mar 13, 2017 | Team Udayavani |

ಮೂಲ್ಕಿ: ಉತ್ತರ ಭಾರತದ ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಬಹುಮತ ಗಳಿಸಿದ ಹಿನ್ನೆಲೆಯಲ್ಲಿ ಮೂಲ್ಕಿ -ಕಿನ್ನಿಗೋಳಿ ಮಂಡಲದ ಬಿಜೆಪಿ ಸದಸ್ಯರು ನಗರದಲ್ಲಿ ವಿಜಯೋತ್ಸವ ಆಚರಿಸಿದರು. ಪ್ರಧಾನಿ ಮೋದಿಯವ ಅಭಿವೃದ್ಧಿಪರ ಯೋಜನೆಗಳನ್ನು ಮೆಚ್ಚಿ ಜನರು ಹರಸಿದ್ದು, ರಾಜ್ಯದಲ್ಲೂ ಇದೇ ರೀತಿಯ ಫಲಿತಾಂಶ ಬರಲಿದೆ ಎಂದು ಜಿ.ಪಂ.ಉಪಾಧ್ಯಕ್ಷೆ ಕಸ್ತೂರಿ ಪಂಜ  ಹೇಳಿದರು.

Advertisement

ಮೂಡಬಿದಿರೆ- ಮೂಲ್ಕಿ  ಕ್ಷೇತ್ರದ ಬಿಜೆಪಿ ಅಧ್ಯಕ್ಷ ಈಶ್ವರ ಕಟೀಲು ಮಾತನಾಡಿ, ಸಂಘಟಿತ ಹೋರಾಟ ಜನಪರ ಯೋಜನೆಗಳು ಮತ್ತು ಸ್ವತ್ಛ, ಪಾರದರ್ಶಕ  ಆಡಳಿತ ನಡೆಸುವ ಬಿಜೆಪಿ ಸರಕಾರದ ಸಾಧನೆಯಿಂದ ಬಂದಿರುವ ಗೆಲುವಿನಿಂದ ದೇಶಕ್ಕೆ ಉತ್ತಮ ಭವಿಷ್ಯ ಇದೆ ಎಂದು ಹೇಳಿದರು.

ಪಕ್ಷದ ಪ್ರಮುಖರಾದ ಕೆ.ಭುವನಾಭಿ ರಾಮ ಉಡುಪ, ತಾ.ಪಂ.ಸದಸ್ಯರಾದ ಶರತ್‌ ಕುಬೆವೂರು, ಮೂಲ್ಕಿ ಶಕ್ತಿ ಕೇಂದ್ರದ ಅಧ್ಯಕ್ಷ ಸತ್ಯೇಂದ್ರ ಶೆಣೈ, ಕಿನ್ನಿಗೋಳಿ ಶಕ್ತಿ ಕೇಂದ್ರದ ಅಧ್ಯಕ್ಷ ಸಂತೋಷ್‌ ಶೆಟ್ಟಿ, ಯುವಮೋರ್ಚಾ ಅಧ್ಯಕ್ಷ ಅಭಿಲಾಶ್‌, ಮೂಲ್ಕಿ ನಗರ ಪಂ. ಉಪಾಧ್ಯಕ್ಷೆ ರಾಧಿಕಾ ಯಾದವ ಕೋಟ್ಯಾನ್‌, ಮಾಜಿ ಉಪಾಧ್ಯಕ್ಷೆ ವಸಂತಿ ಭಂಡಾರಿ, ಸದಸ್ಯರಾದ ಶೈಲೇಶ್‌ ಕುಮಾರ್‌, ಮೀನಾಕ್ಷಿ ಪ್ರಮುಖರಾದ ಸರೋಜಿನಿ ಗುಜರನ್‌, ವಿಠಲ, ನರಸಿಂಹ ಪೂಜಾರಿ, ನೂತನ್‌ ಶೆಟ್ಟಿ,ರವೀಂದ್ರ ಶೆಟ್ಟಿ  ಮುಂತಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next