Advertisement

ಬಿಜೆಪಿಯಿಂದ ರೈತರಿಗಿನ್ನು ಕೃಷಿಯ ಅಧ್ಯಾತ್ಮ, ಧಾರ್ಮಿಕ ಪಾಠ!

09:25 AM Oct 14, 2017 | Team Udayavani |

ಹೊಸದಿಲ್ಲಿ: ಕೇಂದ್ರ ಸರಕಾರದ ಸಾಧನೆಗಳನ್ನು ರೈತರಿಗೆ ತಲುಪಿಸುವ ಉದ್ದೇಶದಿಂದ ಬಿಜೆಪಿ ದೇಶಾದ್ಯಂತ ಸುಮಾರು 50,000 ಕಾರ್ಯಕರ್ತರನ್ನು ಕೃಷಿಗೆ ಸಂಬಂಧಿಸಿದಂತೆ ಅಧ್ಯಾತ್ಮ ಮತ್ತು ಧಾರ್ಮಿಕ ಪಾಠಗಳನ್ನು ಮಾಡಲು ಬಳಸಿಕೊಳ್ಳಲಿದೆ.

Advertisement

ಇತ್ತೀಚಿನ ಕೆಲವು ತಿಂಗಳುಗಳಿಂದೀಚೆಗೆ ದೇಶಾದ್ಯಂತದ ರೈತರು ಸರಕಾರದ ಬಗೆಗೆ ತೀವ್ರ ಅಸಮಾಧಾನಗೊಂಡಿರುವ ಹಿನ್ನೆಲೆಯಲ್ಲಿ ಅವರಿಗೆ ಸರಕಾರ ಕೈಗೊಂಡಿರುವ ಯೋಜನೆಗಳ ಬಗೆಗೆ ಅರಿವು ಮೂಡಿಸಿ ರೈತರು ಈ ಯೋಜನೆಗಳ ಪ್ರಯೋಜನಗಳನ್ನು ಪಡೆದುಕೊಳ್ಳುವ ನಿಟ್ಟಿನಲ್ಲಿ ಪಕ್ಷ ಈ ಕಾರ್ಯಕ್ರಮವನ್ನು ಹಾಕಿಕೊಂಡಿದೆ. ಅಷ್ಟೇ ಅಲ್ಲದೆ 2022ರ ವೇಳೆಗೆ ರೈತರ ಆದಾಯವನ್ನು ಇಮ್ಮಡಿಗೊಳಿಸುವ ಸರಕಾರದ ಗುರಿಯನ್ನು ತಲುಪಲು ಈ ಕಾರ್ಯಕ್ರಮ ಸಹಕಾರಿಯಾಗಲಿದೆ. 

ಕೃಷಿ ಕ್ಷೇತ್ರದ ಆಧ್ಯಾತ್ಮಿಕ ಮತ್ತು ಧಾರ್ಮಿಕ ಆಯಾಮಗಳ ಜತೆಯಲ್ಲಿ ಕೃಷಿಯ ಇತಿಹಾಸ, ಕೃಷಿ ವಲಯದಲ್ಲಿನ ಪ್ರಸಕ್ತ ಪರಿಸ್ಥಿತಿ, ಕೇಂದ್ರ ಮತ್ತು ರಾಜ್ಯ ಸರಕಾರಗಳ ಸಾಧನೆಗಳು ಮತ್ತು ರೈತರ ಕಲ್ಯಾಣಕ್ಕಾಗಿನ ಸಲಹೆಗಳ ಕುರಿತಂತೆ ಈ  ತರಬೇತಿ ಕಾರ್ಯಕ್ರಮದಲ್ಲಿ ಬೆಳಕು ಚೆಲ್ಲಲಾಗುವುದು ಎಂದು  ಬಿಜೆಪಿಯ ನಾಯಕರೋರ್ವರು ತಿಳಿಸಿದರು. ದೀಪಾವಳಿಯ ಬಳಿಕ ಈ ತರಬೇತಿ ಕಾರ್ಯಕ್ರಮ ಆರಂಭಗೊಳ್ಳಲಿದ್ದು ವಿಧಾನಸಭೆ ಕ್ಷೇತ್ರಗಳ ಆಧಾರದಲ್ಲಿ ತರಬೇತಿ ಕಾರ್ಯಕ್ರಮವನ್ನು ನಡೆಸಲಾಗುವುದು ಎಂದರು. 

Advertisement

Udayavani is now on Telegram. Click here to join our channel and stay updated with the latest news.

Next