Advertisement

BJP-TMC ಭಾರೀ ಘರ್ಷಣೆ: ಬಿಜೆಪಿ ಮಹಿಳಾ ಕಾರ್ಯಕರ್ತೆ ಸಾವು

01:04 AM May 24, 2024 | Team Udayavani |

ಕೋಲ್ಕತಾ: ಲೋಕಸಭಾ ಚುನಾವಣೆಯ 6ನೇ ಹಂತದ ಮತದಾನಕ್ಕೆ 2 ದಿನ ಬಾಕಿಯಿರುವಂತೆಯೇ ಪಶ್ಚಿಮ ಬಂಗಾಲದ ಪೂರ್ವ ಮೇದಿನಿಪುರ, ನಂದಿ ಗ್ರಾಮ ಜಿಲ್ಲೆಗಳಲ್ಲಿ ಹಿಂಸಾಚಾರ ನಡೆದಿದೆ. ಬುಧವಾರ ರಾತ್ರಿ ಟಿಎಂಸಿ ಕಾರ್ಯಕರ್ತರು ನಮ್ಮ ಮೇಲೆ ಹಲ್ಲೆ ನಡೆಸಿದ್ದು, ಈ ವೇಳೆ ಮಹಿಳಾ ಕಾರ್ಯಕರ್ತರು ಮೃತಪಟ್ಟಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.

Advertisement

ಹಲ್ಲೆಯಲ್ಲಿ ಕಾರ್ಯಕರ್ತೆ ರೊತಿಬಾಲ ಮೃತಪಟ್ಟಿದ್ದು, 7 ಮಂದಿ ಗಾಯಗೊಂಡಿದ್ದಾರೆ ಎಂದು ಆರೋಪಿಸಿ ನಂದಿಗ್ರಾಮದಲ್ಲಿ ಬಿಜೆಪಿ 12 ಗಂಟೆ ಬಂದ್‌ಗೆ ಕರೆ ನೀಡಿದೆ. ಈ ವೇಳೆ ಅಂಗಡಿಗಳಿಗೆ ಬೆಂಕಿಯಿಟ್ಟಿದ್ದಾರೆ. ಕೊನೆಗೆ ಪೊಲೀಸರು ಲಾಠಿಪ್ರಹಾರ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next