Advertisement

BJP ಮಧ್ಯಪ್ರದೇಶದಲ್ಲಿ 7 ಸಂಸದರಿಗೆ ಟಿಕೆಟ್‌, ಲಾಭವೇನು?

12:13 AM Oct 27, 2023 | Team Udayavani |

ಪ್ರತೀ ಬಾರಿ ವಿಧಾನಸಭೆ, ಲೋಕಸಭಾ ಚುನಾವಣೆಗಳು ಬಂದಾಗಲೂ ಬಿಜೆಪಿ ಏನಾದರೂ ಒಂದು ಪ್ರಯೋಗ ಮಾಡುತ್ತಲೇ ಇರುತ್ತದೆ. ಯಶಸ್ವಿಯಾಗಲಿ, ಬಿಡಲಿ ಪ್ರಯೋಗಗಳಂತೂ ನಿರಂತರವಾಗಿ ನಡೆಯುತ್ತವೆ. ಕರ್ನಾಟಕದಲ್ಲಿ ಹೊಸಬರಿಗೆ ಟಿಕೆಟ್‌ ಕೊಟ್ಟು, ನಾಯಕತ್ವ ಬದಲಿಸಿ ಭಾರೀ ಬೆಲೆ ತೆತ್ತಿದೆ. ಪ್ರಸ್ತುತ ಮಧ್ಯಪ್ರದೇಶದಲ್ಲಿ 7 ಜನ ಲೋಕಸಭಾ ಸದಸ್ಯರಿಗೆ ಟಿಕೆಟ್‌ ನೀಡಿದೆ! ಇದರಲ್ಲಿ ನರೇಂದ್ರ ಸಿಂಗ್‌ ತೋಮರ್‌, ಪ್ರಹ್ಲಾದ್‌ ಸಿಂಗ್‌ ಪಟೇಲ್‌, ಫ‌ಗ್ಗಾನ್‌ ಸಿಂಗ್‌ ಕುಲಸ್ತೆ ಕೇಂದ್ರ ಸಚಿವರು. ಇವರೆಲ್ಲ ಸಿಎಂ ಸ್ಥಾನಕ್ಕೆ ಪೈಪೋಟಿ ಒಡ್ಡಬಲ್ಲವರೂ ಹೌದು.

Advertisement

ಇವರನ್ನೆಲ್ಲ ಬಿಜೆಪಿ ಜಿಲ್ಲಾ ಘಟಕಗಳು ಶಿಫಾರಸು ಮಾಡಿಲ್ಲ, ಆದರೆ ಕೇಂದ್ರ ಸಂಸದೀಯ ಸಮಿತಿಯೇ ಕಣಕ್ಕಿಳಿಸಿದೆ. ಯಾವ ಆಧಾರದಲ್ಲಿ ಹೀಗೆ ಮಾಡಲಾಗಿದೆ? ಮುಂದಿನ ವರ್ಷ ಲೋಕಸಭಾ ಚುನಾವಣೆ ಇರುವಾಗ ಇವರನ್ನು ವಿಧಾನಸಭೆಯಲ್ಲಿ ಸ್ಪರ್ಧಿಸಲು ಕಳುಹಿಸಿರುವುದೇಕೆ ಎಂಬುದೆಲ್ಲ ದೊಡ್ಡ ಪ್ರಶ್ನೆಗಳು. ರಾಜಕೀಯ ವಿಶ್ಲೇಷಕರ ಪ್ರಕಾರ, ಇದರ ಹಿಂದೆ ಬಿಜೆಪಿಯ ಯಾವುದೇ ತಂತ್ರಗಳಿದ್ದರೂ, ವಿಶೇಷ ಪರಿಣಾಮ ಬೀರುವು ದಿಲ್ಲ. ಕೇವಲ ಅಭ್ಯರ್ಥಿಗಳನ್ನು ಬದಲಿಸಿದ ಮಾತ್ರಕ್ಕೆ, ಮತದಾರರ ಅಭಿಪ್ರಾಯ ಬದಲಾ ಗಲು ಸಾಧ್ಯವೇ? ಇದು ಬಿಜೆಪಿಯೊಳಗೆ ಒಳ ಜಗಳ ತಂದಿಡುತ್ತದೆ. ಎಲ್ಲಕ್ಕಿಂತ ಮುಖ್ಯಮಂತ್ರಿ ಸ್ಥಾನದಲ್ಲಿ ಭದ್ರ ವಾಗಿ ಕುಳಿತಿರುವ ಶಿವರಾಜ್‌ ಸಿಂಗ್‌ ಚೌಹಾಣ್‌ಗೆ ಹೊಸಬರು ಸವಾಲು ಹಾಕಿದರೆ, ಎಲ್ಲವೂ ಸುಗಮವಾಗಿ ನಡೆಯಲು ಸಾಧ್ಯವೇ ಎಂದು ಪ್ರಶ್ನಿಸುತ್ತಾರೆ.

ಇಂದೋರ್‌-1ನಿಂದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೈಲಾಶ್‌ ವಿಜಯವರ್ಗೀಯ ರಿಗೆ ಅವಕಾಶ ನೀಡಲಾಗಿದೆ. ಇವರೂ ಮುಖ್ಯಮಂತ್ರಿ ಸ್ಥಾನಕ್ಕೇರುವ ಸಂಭಾವ್ಯ ವ್ಯಕ್ತಿ. ಮೊರೆನಾ ಲೋಕಸಭಾ ಕ್ಷೇತ್ರದಿಂದ ಗೆದ್ದಿರುವ ತೋಮರ್‌ಗೆ ದಿಮಾನಿ ವಿಧಾನಸಭಾ ಕ್ಷೇತ್ರದಿಂದ ಟಿಕೆಟ್‌ ನೀಡಲಾಗಿದೆ. ಈ ಕ್ಷೇತ್ರದಲ್ಲಿ ಸತತ 3 ಬಾರಿ ಬಿಜೆಪಿ ಸೋತಿದೆ. ಇನ್ನು ಮೊರೆನಾ ವ್ಯಾಪ್ತಿಯಲ್ಲಿ ಬರುವ 8 ವಿಧಾನಸಭಾ ಕ್ಷೇತ್ರಗಳಲ್ಲಿ, ಕಳೆದ ಚುನಾವಣೆ ಯಲ್ಲಿ ಬಿಜೆಪಿ 7ರಲ್ಲಿ ಸೋತಿತ್ತು! ಹೀಗಿರುವಾಗ ಮುಖಗಳು ಬದಲಾದಾಗ ಪರಿಸ್ಥಿತಿ ಬದಲಾಗುತ್ತಾ ಎನ್ನುವುದು ಸಹಜ ಪ್ರಶ್ನೆ.

347 ಕೋಟಿ ರೂ. ಮೌಲ್ಯದ ವಸ್ತುಗಳ ಜಪ್ತಿ
ಚುನಾವಣೆಯ ಹೊಸ್ತಿಲಲ್ಲಿರುವ ತೆಲಂಗಾಣದಲ್ಲಿ ನೀತಿ ಸಂಹಿತೆ ಜಾರಿಯಾದ ಬಳಿಕ ಅಂದರೆ ಅ.9ರಿಂದ ಈವರೆಗೆ ಚುನಾವಣ ಅಕ್ರಮಕ್ಕೆ ಸಂಬಂಧಿಸಿ ಒಟ್ಟು 347 ಕೋಟಿ ರೂ.ಗಳ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. 122.6 ಕೋಟಿ ರೂ. ನಗದು, 230.9 ಕೆ.ಜಿ. ಚಿನ್ನ, 1038.9 ಕೆ.ಜಿ. ಬೆಳ್ಳಿ ಹಾಗೂ 156.2 ಕೋಟಿ ರೂ. ಮೌಲ್ಯದ ಇತರ ಅಮೂಲ್ಯ ವಸ್ತುಗಳು, 20.7 ಕೋಟಿ ರೂ. ಮೌಲ್ಯದ ಮದ್ಯ, 17.18 ಕೋಟಿ ರೂ. ಮೌಲ್ಯದ ಗಾಂಜಾ ಮತ್ತು 30.4 ಕೋಟಿ ರೂ. ಮೌಲ್ಯದ ಉಡುಗೊರೆಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಚುನಾವಣ ಆಯೋಗ ತಿಳಿಸಿದೆ. ನ.30ರಂದು ರಾಜ್ಯ ವಿಧಾನಸಭೆಗೆ ಮತದಾನ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next