Advertisement

ಯಡಿಯೂರಪ್ಪ ಎದುರೇ ಯತ್ನಾಳ,ಜಿಗಜಿಣಗಿ ಬೆಂಬಲಿಗರ ಹೊಡೆದಾಟ

01:38 AM Feb 24, 2019 | Team Udayavani |

ವಿಜಯಪುರ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಸಮ್ಮುಖದಲ್ಲೇ ಕೇಂದ್ರ ಸಚಿವ ರಮೇಶ  ಜಿಗಜಿಣಗಿ ಹಾಗೂ ಶಾಸಕ ಬಸನಗೌಡ ಪಾಟೀಲ ಯತ್ನಾಳ ಬೆಂಬಲಿಗರ ಮಧ್ಯೆ ಶನಿವಾರ ನಗರದಲ್ಲಿ ಮಾರಾಮಾರಿ ನಡೆದಿದೆ.

Advertisement

ಜಿಪಂ ಕಚೇರಿ ಎದುರಿನ ಮೈದಾನದಲ್ಲಿ ಲೋಕಸಭೆ ಚುನಾವಣೆ ಸಿದಟಛಿತೆಗಾಗಿ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಹಮ್ಮಿಕೊಂಡಿತ್ತು. ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಸೇರಿ ಎಲ್ಲ ಗಣ್ಯರು ವೇದಿಕೆ ಏರಿದ್ದರು. ಈ ಹಂತದಲ್ಲಿ ಯತ್ನಾಳ ಬೆಂಬಲಿಗರು “ಅಭ್ಯರ್ಥಿ ಬದಲಿಸಿ, ಬಿಜೆಪಿ ಉಳಿಸಿ’ ಎಂದು ಘೋಷಣೆ ಕೂಗಲು ಆರಂಭಿಸಿದರು. ಅಲ್ಲದೇ ಲೋಕಸಭೆ ಚುನಾವಣೆಗೆ ಈ ಬಾರಿ ಜಿಗಜಿಣಗಿ ಅವರಿಗೆ ಟಿಕೆಟ್‌ ನೀಡದಂತೆ ಲಿಖೀತ ಮನವಿ ಹಿಡಿದು ಘೋಷಣೆ ಕೂಗುತ್ತಿದ್ದರು. ಕಾರ್ಯಕರ್ತರ ಘೋಷಣೆ ಹೆಚ್ಚಾಗುತ್ತಲೇ ಯಡಿಯೂರಪ್ಪ ಅವರು ವೇದಿಕೆಯಿಂದ ಕೆಳಗಿಳಿದು ಬಂದು ಮನವಿ ಸ್ವೀಕರಿಸಲು ಮುಂದಾದಾಗ ಜಿಗಜಿಣಗಿ ವಿರುದಟಛಿ ಘೋಷಣೆ ಹೆಚ್ಚಾದವು. ಈ ಹಂತದಲ್ಲಿ ಯತ್ನಾಳ ಹಾಗೂ ಜಿಗಜಿಣಗಿ ಬೆಂಬಲಿಗರ ಮಧ್ಯೆ ಮಾರಾಮಾರಿ ನಡೆದು, ಪ್ಲಾಸ್ಟಿಕ್‌ ಕುರ್ಚಿಗಳನ್ನು ತೂರಾಡಿದರು. ಒಂದು ಹಂತದಲ್ಲಿ ಯಡಿಯೂರಪ್ಪ ಅವರಿಗೂ ಪರಿಸ್ಥಿತಿ ನಿಯಂತ್ರಿಸುವುದು ಕಷ್ಟವಾಯಿತು.

ಅಂತಿಮವಾಗಿ ಸ್ಥಳದಲ್ಲಿದ್ದ ಪೊಲೀಸರು ಮಧ್ಯಪ್ರವೇಶಿಸಿ ಕೆಲವರನ್ನು ವಶಕ್ಕೆ ಪಡೆದರು. ಘಟನೆಯಲ್ಲಿ ಸವನಳ್ಳಿ ಗ್ರಾಮದ ತೊನಶಾಳ ಗ್ರಾಮದ ಶರಣು ಹಚಡದ ಹಾಗೂ ನಗರದ ಐನಗೌಡ ಪಾಟೀಲ ಎಂಬವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

Advertisement

Udayavani is now on Telegram. Click here to join our channel and stay updated with the latest news.

Next