Advertisement

ರಾಜಕೀಯ ಅಸ್ಪ್ರೃಶ್ಯತೆ, ಹಿಂಸಾಚಾರಕ್ಕೆ ಬಿಜೆಪಿ ಗುರಿಯಾಗಿದೆ: ನರೇಂದ್ರ ಮೋದಿ

09:52 AM May 28, 2019 | Team Udayavani |

ಉತ್ತರಪ್ರದೇಶ/ವಾರಣಾಸಿ:ಭಾರತೀಯ ಜನತಾ ಪಕ್ಷ ರಾಜಕೀಯ ಅಸ್ಪ್ರೃಶ್ಯತೆ ಮತ್ತು ರಾಜಕೀಯ ಹಿಂಸಾಚಾರದ ಎರಡು ಮುಖ್ಯ ಸಮಸ್ಯೆಯನ್ನು ಎದುರಿಸುತ್ತಿದೆ. ಆದರೆ ಇಂದು ದೇಶದಲ್ಲಿ ರಾಜಕೀಯ ಪ್ರಚಾರದಿಂದಾಗಿ ಒಂದು ಪಕ್ಷ ಪ್ರಜಾಪ್ರಭುತ್ವದಲ್ಲಿ ಉಸಿರಾಡತೊಡಗಿದೆ. ಅದುವೇ ಭಾರತೀಯ ಜನತಾ ಪಕ್ಷ. ಯಾವಾಗ ನಾವು ಅಧಿಕಾರಕ್ಕೆ ಬಂದೆವು ಅಂದಿನಿಂದ ಪ್ರಜಾಪ್ರಭುತ್ವದ ರಕ್ಷಣೆ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

Advertisement

ಅವರು ಸೋಮವಾರ ಬೆಳಗ್ಗೆ ವಾರಣಾಸಿಯಲ್ಲಿನ ಕಾಶಿ ವಿಶ್ವನಾಥ ದೇವಾಲಯಕ್ಕೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಜೊತೆಗೂಡಿ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ವಾರಣಾಸಿಯ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.

ಕೆಲವು ರಾಜ್ಯಗಳಲ್ಲಿ ರಾಜಕೀಯ ದೃಷ್ಟಿಕೋನದಿಂದಾಗಿ ನೂರಾರು ಬಿಜೆಪಿ ಕಾರ್ಯಕರ್ತರು ಹತ್ಯೆಗೀಡಾದರು. ನಮ್ಮ ದೇಶದಲ್ಲಿ ರಾಜಕೀಯ ಅಸ್ಪ್ರೃಶ್ಯತೆಯ ಲಾಭ ಪಡೆಯಲು ಹವಣಿಸುತ್ತಿದ್ದವು. ಇನ್ನು ಕೆಲವು ಸ್ಥಳಗಳಲ್ಲಿ ಕೇವಲ ಬಿಜೆಪಿಯ ಹೆಸರಿನಿಂದಾಗಿಯೇ ಅಸ್ಪ್ರೃಶ್ಯತೆಯ ವಾತಾವರಣವನ್ನು ನಿರ್ಮಿಸಲಾಗಿತ್ತು ಎಂದರು.

2019ರ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ಅವರು ವಾರಣಾಸಿ ಕ್ಷೇತ್ರದಿಂದ ಬರೋಬ್ಬರಿ 6.7 ಲಕ್ಷ ಮತಗಳಿಂದ ಪುನರಾಯ್ಕೆಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next