Advertisement

ಯುವಕರ ದಾರಿ ತಪ್ಪಿಸುವ ಬಿಜೆಪಿ : ಕುಮಾರಸ್ವಾಮಿ

09:14 AM Apr 04, 2019 | keerthan |

ಕುಂದಾಪುರ: ರಾಜ್ಯದಲ್ಲಿ ಮೋದಿ ಅಲೆಯೇ ಇಲ್ಲ. ರಾಜ್ಯಕ್ಕೆ ಕೇಂದ್ರದ ಕೊಡುಗೆ ಏನೂ ಇಲ್ಲ. ಆದ್ದರಿಂದ ಅನಂತ ಕುಮಾರ ಹೆಗಡೆ, ಈಶ್ವರಪ್ಪ ಬಳಿ ಕೀಳು ಮಟ್ಟದಲ್ಲಿ ಮಾತನಾಡಿಸಲಾಗುತ್ತದೆ. ಯುವಕರ ದಾರಿ ತಪ್ಪಿಸಿ ಮತ ಕೇಳುತ್ತಿದ್ದಾರೆ ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

Advertisement

ಬುಧವಾರ ರಾತ್ರಿ ಇಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಬಿಜೆಪಿಯವರು ಸೋಲಿಗೆ ಸಿದ್ಧರಾಗಬೇಕಿದೆ. ಉಡುಪಿ, ಮಂಗಳೂರು, ಶಿವಮೊಗ್ಗದಲ್ಲಿ ಗೆಲುವು ಲಭಿಸುತ್ತದೆ. ಕರಾವಳಿ ಯುವಕರ ಉದ್ಯೋಗಕ್ಕೆ ಪರಿಸರ ಸಹ್ಯ ಕಾರ್ಖಾನೆಗಳ ಸ್ಥಾಪನೆಗೆ ಚಿಂತಿಸಲಾಗಿದೆ ಎಂದರು.

ಜಾತಿ ರಾಜಕಾರಣ ಇಲ್ಲ
ಜಾತಿ ಹೆಸರಿನಲ್ಲಿ ನಾನು ರಾಜಕಾರಣ ಮಾಡುವುದಿಲ್ಲ. ಮಂಡ್ಯದಲ್ಲಿ ಯಾರು ಏನೇ ಪ್ರಚಾರ ಮಾಡಿದರೂ ನಿಖೀಲ್‌ ಗೆಲುವು ನಿಶ್ಚಿತ. ಇಡೀ ದೇಶದಲ್ಲಿ ಮಂಡ್ಯದಲ್ಲಿ ಮಾತ್ರ ಚುನಾವಣೆ ನಡೆಯುತ್ತಿದೆ ಎಂಬಂತೆ ಬಿಂಬಿಸುವುದು ಸರಿಯಲ್ಲ. ಏನೇ ಅಪಪ್ರಚಾರ ನಡೆದರೂ ಮಂಡ್ಯದಲ್ಲಿ ಸಮ್ಮಿಶ್ರ ಅಭ್ಯರ್ಥಿಯದ್ದೇ ಗೆಲುವು. ರಾಜ್ಯದಲ್ಲಿ 20ಕ್ಕೆ ಕಡಿಮೆಯಾಗದಷ್ಟು ಸ್ಥಾನಗಳನ್ನು ಗೆಲ್ಲಲಿದ್ದೇವೆ ಎಂದರು.

ಪ್ರಮೋದ್‌ ಮಧ್ವರಾಜ್‌, ಡಾ| ಜಯಮಾಲಾ, ಎಸ್‌.ಎಲ್‌. ಭೋಜೇಗೌಡ, ಕೆ. ಗೋಪಾಲ ಪೂಜಾರಿ. ಯು.ಆರ್‌. ಸಭಾಪತಿ ಉಪಸ್ಥಿತರಿದ್ದರು.

ದೊರೆಯದ ಹೆಲಿಕಾಪ್ಟರ್‌
ಒಂದು ವಾರದಿಂದ ಸತತ ಪ್ರಯತ್ನ ಮಾಡುತ್ತಿದ್ದರೂ ಹೆಲಿಕಾಪ್ಟರ್‌ ದೊರೆಯಲಿಲ್ಲ. ಆದ್ದರಿಂದ ಮುಂಜಾನೆ ಬೆಂಗಳೂರಿನಿಂದ ಕಾರಿನಲ್ಲಿ ಶಿವಮೊಗ್ಗ, ಕುಂದಾಪುರ, ಉ.ಕ. ಪ್ರಯಾಣದಲ್ಲಿದ್ದೇನೆ. ತಲುಪುವುದು ವಿಳಂಬವಾಗುತ್ತಿದೆ ಎಂದು ಕುಮಾರಸ್ವಾಮಿ ಹೇಳಿದರು.

Advertisement

ಎ. 7ರಂದು ಉಡುಪಿ, ದ.ಕ.ಕ್ಕೆ
ಚಿಕ್ಕಮಗಳೂರಿನಲ್ಲಿ ಎ. 5ರಂದು, ಉಡುಪಿಯಲ್ಲಿ ಮೂರು ಕಡೆ ಎ. 7ರಂದು, ಅದೇ ದಿನ ಸುಳ್ಯ, ಪುತ್ತೂರು ಭಾಗದಲ್ಲಿ ಪ್ರಚಾರ ಸಭೆಗಳಲ್ಲಿ ಭಾಗವಹಿಸಲಿದ್ದೇನೆ ಎಂದು ಕುಮಾರಸ್ವಾಮಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next