Advertisement

ಬಿಜೆಪಿ ಎಸ್‌ಸಿ ಮೋರ್ಚಾ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ

12:21 PM Mar 26, 2019 | Team Udayavani |

ಬೆಂಗಳೂರು: ಬಿಜೆಪಿಯ ಕೆಲವು ಮುಖಂಡರ ದುರ್ವತನೆ ಹಾಗೂ ಎಸ್‌ಸಿ ಮೋರ್ಚಾದ ನಿರ್ಲಕ್ಷ್ಯ ವಿರೋಧಿಸಿ ಬೆಂಗಳೂರು ಮಹಾನಗರ ಬಿಜೆಪಿ ಎಸ್‌ಸಿ ಮೋರ್ಚಾದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವುದಾಗಿ ಎಚ್‌.ಕೋದಂಡರಾಮ ತಿಳಿಸಿದ್ದಾರೆ.

Advertisement

ವಿಧಾನಸಭಾ ಕ್ಷೇತ್ರವ್ಯಾಪ್ತಿಗಳಲ್ಲಿರುವ ಎಸ್ಸಿ ಮೋರ್ಚಾದ ಘಟಕಕ್ಕೆ ಯಾವುದೇ ರೀತಿಯಲ್ಲೂ ಆದ್ಯತೆ ನೀಡುತ್ತಿಲ್ಲ. ಮುಖಂಡರ ಮಾತುಗಳನ್ನು ಮಾತ್ರ ಕೇಳಿಸಿಕೊಳ್ಳಬೇಕಾದ ಸ್ಥಿತಿ ಇದೆ. ಚುನಾವಣಾ ಸಮಿತಿಗೂ ಮೋರ್ಚಾದ ಸದಸ್ಯರನ್ನು ಸೇರಿಸಿಲ್ಲ. ಇಂತಹ ಅನೇಕ ಕಾರಣಗಳಿಗಾಗಿ ರಾಜೀನಾಮೆ ನೀಡುತ್ತಿದ್ದೇನೆ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next