Advertisement

ಜಾರ್ಖಂಡ್ ಮತದಾರರ ಜನಾದೇಶ ನಾವು ಗೌರವಿಸುತ್ತೇವೆ; ಅಮಿತ್ ಶಾ

09:40 AM Dec 24, 2019 | Team Udayavani |

ನವದೆಹಲಿ: ಜಾರ್ಖಂಡ್ ವಿಧಾನಸಭಾ ಚುನಾವಣೆಯಲ್ಲಿ ಜೆಎಂಎಂ, ಕಾಂಗ್ರೆಸ್ ಮೈತ್ರಿಕೂಟ ಸ್ಪಷ್ಟ ಜನಾದೇಶ ಪಡೆದಿದ್ದು, ಬಿಜೆಪಿ ಪರಾಜಯಗೊಂಡ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ವರಿಷ್ಠ ಅಮಿತ್ ಶಾ, ಜಾರ್ಖಂಡ್ ಜನರ ಜನಾದೇಶವನ್ನು ಗೌರವಿಸುವುದಾಗಿ ತಿಳಿಸಿದ್ದಾರೆ.

Advertisement

ಜಾರ್ಖಂಡ್ ಜನತೆ ನೀಡಿರುವ ತೀರ್ಪನ್ನು ನಾವು ಗೌರವಿಸುತ್ತೇವೆ. ಐದು ವರ್ಷಗಳ ಕಾಲ ರಾಜ್ಯದ ಜನರ ಸೇವೆ ಸಲ್ಲಿಸಲು ಅವಕಾಶ ನೀಡಿದ್ದಕ್ಕೆ ನಾವು ಜನರಿಗೆ ಋಣಿಯಾಗಿದ್ದೇವೆ. ಅಲ್ಲದೇ ರಾಜ್ಯದ ಅಭಿವೃದ್ದಿ ಕುರಿತು ಬಿಜೆಪಿ ಬದ್ಧವಾಗಿದೆ. ಚುನಾವಣೆಯಲ್ಲಿ ಶ್ರಮವಹಿಸಿ ದುಡಿದ ಪಕ್ಷದ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸುವುದಾಗಿ ಈ ಸಂದರ್ಭದಲ್ಲಿ ಹೇಳಿದರು.

ಜಾರ್ಖಂಡ್ ಚುನಾವಣಾ ಮತಎಣಿಕೆ ನಡೆಯುತ್ತಿದ್ದು, 81 ಸದಸ್ಯ ಬಲದ ಜಾರ್ಖಂಡ್ ವಿಧಾನಸಭೆಯಲ್ಲಿ ಜೆಎಂಎಂ, ಕಾಂಗ್ರೆಸ್ ಮೈತ್ರಿಕೂಟ 46 ಸ್ಥಾನಗಳಲ್ಲಿ , ಬಿಜೆಪಿ 26 ಸ್ಥಾನಗಳಲ್ಲಿ ಜಯಗಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next