Advertisement

ಹುಬ್ಬಳ್ಳಿಯಲ್ಲಿ ಬಿಜೆಪಿ ಪ್ರತಿಭಟನೆ :ಪೊಲೀಸರ ವಿರುದ್ಧ ಘೋಷಣೆ, ರಸ್ತೆ ತಡೆ

01:08 PM Jan 07, 2022 | Team Udayavani |

ಹುಬ್ಬಳ್ಳಿ: ಪ್ರಧಾನಿ ಅವರಿಗಾದ ಭದ್ರತಾ ಲೋಪ ಖಂಡಿಸಿ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ ಪೊಲೀಸರ ವಿರುದ್ಧ ತಿರುಗಿದ ಘಟನೆ ಶುಕ್ರವಾರ ನಡೆಯಿತು.

Advertisement

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಪಂಜಾಬ್ ನಲ್ಲಿ ಸರಕಾರಿ ಕಾರ್ಯಕ್ರಮಕ್ಕೆ ತೆರಳಿದಾಗ ಅಲ್ಲಿನ ಸರಕಾರ ಸೂಕ್ತ ಭದ್ರತೆ ನೀಡಿಲ್ಲ. ದುರುದ್ದೇಶದಿಂದ ಈ ಕೃತ್ಯ ಎಸಗಿದ್ದಾರೆ ಎಂದು ವಿರೋಧಿಸಿ ಆಕ್ರೋಶ ಹೊರ ಹಾಕಿದರು.

ಪ್ರತಿಭಟನಾ ನಿರತರು ಕಾರವಾರ ರಸ್ತೆಯಲ್ಲಿರುವ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಯತ್ನ ನಡೆಸಿದರು. ನಂತರ ಕಾರ್ಯಕರ್ತನೊಬ್ಬ ಕಾಂಗ್ರೆಸ್ ಕಚೇರಿ ಮುಂಭಾಗದಲ್ಲಿ ಅಳವಡಿಸಿದ್ದ ನಾಯಕರ ಭಾವಚಿತ್ರಗಳಿಗೆ ಸಗಣಿ ಎರಚುವ ಪ್ರಯತ್ನ ಮಾಡಿದ. ಇದರ ನಡುವೆ ಕಾರ್ಯಕನೊಬ್ಬ ಪೊಲೀಸರಿಂದ ನುಸಳಿ ಭಾವಚಿತ್ರಗಳಿಗೆ ಸಗಣಿ ಹಚ್ಚಲು ಮುಂದಾದನು.ಕುಪಿತಗೊಂಡ ಪೊಲೀಸ್ ಅಧಿಕಾರಿ ಪ್ರಶ್ನೆ ಮಾಡಿದರು.ಅಕ್ರೋಶಗೊಂಡ ಬಿಜೆಪಿ ಕಾರ್ಯಕರ್ತರು ಜಿಲ್ಲಾ ಪ್ರಧಾನ ಕಾರ್ಯದರ್ಶಿಗೆ ಪ್ರಶ್ನೆ ಮಾಡಿದ್ದು ಯಾಕೆ ಎಂದು ಪೊಲೀಸರ ವಿರುದ್ಧ ಘೋಷಣೆ ಕೂಗಿ ರಸ್ತೆ ತಡೆ ನಡೆಸಿದರು.

ಪಕ್ಷದ ಹಿರಿಯ ಮುಖಂಡರು ಸಮಾಧಾನ ಪಡಿಸಿದರೂ ಕಿವಿಗೊಡದೆ ರಸ್ತೆ ತಡೆಗೆ ಮುಂದಾದರು.ಪ್ರತಿಭಟನೆ ಮುಗಿಸಿ ತೆರಳುವ ವೇಳೆಗೆ ಮಹಾನಗರ ಜಿಲ್ಲಾಧ್ಯಕ್ಷ ಸಂಜಯ ಕಪಟಕರ ಆಗಮಿಸುತಿದ್ದಂತೆ ಪುನಃ ಕಾರ್ಯಕರ್ತರು ರಸ್ತೆ ತಡೆಗೆ ಮುಂದಾದರು.

Advertisement

Udayavani is now on Telegram. Click here to join our channel and stay updated with the latest news.

Next