Advertisement

ಕೆಜಿಎಫ್ ಕ್ಷೇತ್ರದಲ್ಲಿ ಬಿಜೆಪಿಗೆ ಅಧಿಕಾರ

01:33 PM Aug 22, 2020 | Suhan S |

ಬೇತಮಂಗಲ: ಕೆಜಿಎಫ್ ಕ್ಷೇತ್ರದಲ್ಲಿ ಬಿಜೆಪಿ ಆಧಿಕಾರ ಪಡೆಯಲು ಕಾರ್ಯಕರ್ತರು ಶ್ರಮಿಸಬೇಕೆಂದು ಎಂದು ಸಂಸದ ಎಸ್‌.ಮುನಿಸ್ವಾಮಿ ಹೇಳಿದರು.

Advertisement

ಗ್ರಾಮದಲ್ಲಿ ಕೆಜಿಎಫ್ ಬಿಜೆಪಿ ಗ್ರಾಮಾಂತರ ಘಟಕ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ಮಾತನಾಡಿ, ಕೆಜಿಎಫ್ ಕ್ಷೇತ್ರದಲ್ಲಿ ಬಿಜೆಪಿ ಕಾರ್ಯಕರ್ತರು ತಳ ಮಟ್ಟದಿಂದ ಗ್ರಾಪಂ, ತಾಪಂ, ಜಿಪಂ ಹಾಗೂ ವಿಧಾನ ಸಭಾ ಚುನಾವಣೆಗೆ ಪಕ್ಷಕ್ಕೆ ಬಲ ತುಂಬಿ, ಸಕ್ರಿಯವಾಗಿ ಸಂಘಟನೆ ಮಾಡಿ,. ಈ ರಕ್ತದಾನ ಶಿಬಿರದಲ್ಲಿ ನರಸಾಪುರ ಪಿಡಿಒ ಮಹೇಶ್‌, ಕೆಜಿಎಫ್ ಸರ್ಕಲ್‌ ಇನ್ಸ್‌ಪೆಕ್ಟರ್‌ ಸೂರ್ಯ ಪ್ರಕಾಶ್‌, ಬೇತಮಂಗಲ ಪಿಎಸ್ಸೆ„ ನವೀನ್‌, ಕ್ಯಾಸಂಬಳ್ಳಿ ಕಂದಾಯ ಇಲಾಖೆ ಅಧಿಕಾರಿ ನಾರಾಯಣ ಸ್ವಾಮಿ, ಗ್ರಾಮ ಲೆಕ್ಕಿಗ ಚಂದ್ರು, ರಾಮಸಾಗರ ಗ್ರಾಪಂ ಸಿಬ್ಬಂದಿ ಹರಿಕೃಷ್ಣ, ಶ್ರೀನಿವಾಸ್‌, ಜನಪ್ರತಿನಿಧಿಗಳಾದ ಬಿಜೆಪಿಮಹಿಳಾ ವಿಭಾಗ ರಾಜ್ಯಾಧ್ಯಕ್ಷೆ ಗೀತಾ  ವಿವೇಕನಂದರೆಡ್ಡಿ, ಜಿಪಂ ಸದಸ್ಯ ಜಯ ಪ್ರಕಾಶ್‌ ನಾಯ್ಡು ರಕ್ತದಾನ ಮಾಡಿದರು.

ಜಿಪಂ ಸದಸ್ಯೆ ನಿರ್ಮಲಾ ಅಮರೇಶ್‌, ಜಿಲ್ಲಾ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಬಾಲಾಜಿ, ಪ್ರಧಾನಕಾರ್ಯದರ್ಶಿ ಸುರೇಶ್‌ ನಾರಾಯಣ ಕುಟ್ಟಿ, ಜಿಲ್ಲಾ ಕಾರ್ಯದರ್ಶಿ ಧರಣಿ, ಕೆಡಿಎ ಮಾಜಿ ಅಧ್ಯಕ್ಷ ಮುನಿರತ್ನಂ  ನಾಯ್ಡು, ಮುಖಂಡರಾದ ನವೀನ್‌ ರಾಮ್‌, ಕೆಜಿಎಫ್ ಗ್ರಾಮಾಂತರ ಪ್ರಧಾನ ಕಾರ್ಯದರ್ಶಿ ಹೇಮಾರೆಡ್ಡಿ, ಅನಂದ್‌ ಗೌಡ, ಯುವ ಮೊರ್ಚಾ ಪ್ರಧಾನ ಕಾರ್ಯದರ್ಶಿ ಸುಧಾಕರ್‌, ಅರುಣ್‌ ಹಿರೇಮಠ್, ಎಸ್ಸಿ ಮೋರ್ಚಾ ಅಧ್ಯಕ್ಷ ಬೂಚೇಪಲ್ಲಿ ಕೃಷ್ಣಮೂರ್ತಿ, ಕಾರ್ಯದರ್ಶಿ ಐಸಂದ್ರ ಮಂಜುನಾಥ್‌, ಗ್ರಾಪಂ ಮಾಜಿ ಸದಸ್ಯರಾದ ವೆಂಕ ಟೇಶ್‌, ಓಂ ಸುರೇಶ್‌, ಆನಂದ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next