Advertisement
ಈ ಮೂರೂ ಕಾರ್ಯಾಚರಣೆ ಬಗ್ಗೆ ಪಕ್ಷದ ನಾಯಕರೇ ಕಾಂಗ್ರೆಸ್ ಹಾಗೂ ಜೆಡಿಎಸ್ ಮುಖಂಡರಿಗೆ ಮಾಹಿತಿ ಕೊಟ್ಟಿದ್ದರು. ಇದರಿಂದಾಗಿಯೇ ಬಿಜೆಪಿಗೆ ಹಿನ್ನೆಡೆಯುಂಟಾಯಿತು ಎಂಬ ಮಾತುಗಳು ಕೇಳಿಬರುತ್ತಿವೆ.
Related Articles
ಕಾಂಗ್ರೆಸ್ ಹಾಗೂ ಜೆಡಿಎಸ್ನಿಂದ ಶಾಸಕರನ್ನು ಸೆಳೆದು ಸರ್ಕಾರ ರಚನೆಗೆ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಪ್ರಯತ್ನಿಸಿದಾಗ ಇತರೆ ನಾಯಕರು ಸೂಕ್ತ ಸಹಕಾರ ನೀಡಲಿಲ್ಲ. ಬದಲಿಗೆ ಕಾರ್ಯತಂತ್ರದ ಮಾಹಿತಿ ಬಹಿರಂಗಗೊಳಿಸಿದರು. ಆದೇ ರೀತಿ ಬಿಬಿಎಂಪಿಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದು ತಮ್ಮ ನಾಯಕತ್ವ ಸಾಬೀತುಪಡಿಸಲು ಮಾಜಿ ಉಪ ಮುಖ್ಯಮಂತ್ರಿ ಆರ್.ಅಶೋಕ್ ಮುಂದಾಗಿದ್ದರು. ಆದರೆ, ಅಲ್ಲೂ ಪಕ್ಷದ ನಾಯಕರೇ ಕಾರ್ಯತಂತ್ರ ಬಹಿರಂಗೊಳಿಸಿ ವಿಫಲಗೊಳಿಸಿದರು. ಎರಡೂ ಪ್ರಕರಣಗಳಲ್ಲೂ ಏಕ ವ್ಯಕ್ತಿ ಪ್ರತಿಷ್ಠೆ ಕಾರಣವಾಯಿತು. ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಂಡಿರಲಿಲ್ಲ . ಯಡಿಯೂರಪ್ಪ, ಆನಂತಕುಮಾರ್, ಡಿ.ವಿ.ಸದಾನಂದಗೌಡ ಒಂದೊಂದು ತೀರ ಎಂಬಂತಾಗಿತ್ತು. ಇದೇ ಕಾರಣದಿಂದ ಪರಿಷತ್ನಲ್ಲಿ ಮೂರು ಸ್ಥಾನ ಗೆಲ್ಲುವ ಕಾರ್ಯತಂತ್ರವೂ ವಿಫಲವಾಯಿತು ಎನ್ನಲಾಗಿದೆ.
Advertisement
ಮೂರು ಪ್ರಯತ್ನದಲ್ಲೂ ಬಿಜೆಪಿ ವಿಫಲವಾಗಿ ರಾಜಕೀಯವಾಗಿ ಹಿನ್ನಡೆ ಉಂಟಾಗಿರುವುದರಿಂದ ನಾಯಕರಲ್ಲಿ ಅಸಮಾಧಾನ ಭುಗಿಲೆದ್ದಿದ್ದು, ಇಂತಹ ಪ್ರಯತ್ನಗಳ ಮೂಲಕ ಪಕ್ಷಕ್ಕೂ ಮುಜುಗರ ತರುತ್ತಿರುವುದಕ್ಕೆ ಕಡಿವಾಣ ಹಾಕಬೇಕು ಎಂಬ ಒತ್ತಾಯ ಕೇಳಿಬಂದಿದೆ. ಇದನ್ನು ಬಿಟ್ಟು ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಒಟ್ಟಾಗಿ ಸಂಘಟನೆಯಲ್ಲಿ ತೊಡಗಿಸಿಕೊಂಡು ಪಕ್ಷದ ಬಲವರ್ಧನೆಗೆ ಮುಂದಾಗುವುದು ಸೂಕ್ತ. ಇಲ್ಲದಿದ್ದರೆ ಲೋಕಸಭೆ ಚುನಾವಣೆಯಲ್ಲಿ ನಿರೀಕ್ಷಿತ ಸಾಧನೆಗೆ ಅಡ್ಡಿಯಾಗಬಹುದು ಎಂಬ ಆತಂಕವನ್ನೂ ಕೇಂದ್ರ ನಾಯಕರ ಮುಂದೆ ತೋಡಿಕೊಂಡಿದ್ದಾರೆ ಎಂದು ಹೇಳಲಾಗಿದೆ.