Advertisement
ಸದನ ಆರಂಭವಾಗುತ್ತಿದ್ದಂತೆ ವಿಷಯ ಪ್ರಸ್ತಾಪಿಸಿದ ಬಿಜೆಪಿಯ ಜೆ.ಸಿ. ಮಾಧುಸ್ವಾಮಿ, “ಆಡಿಯೋ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಸ್ಐಟಿ ತನಿಖೆಗಿಂತ ಸದನ ಸಮಿತಿಗೆ ವಹಿಸುವುದು ಸೂಕ್ತ. ಹಾಗೆಯೇ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದ ತನಿಖೆಗಿಂತ ಹಾಲಿ ನ್ಯಾಯಾಧೀಶರ ನೇತೃತ್ವದ ಸಮಿತಿಯಿಂದ ತನಿಖೆ ನಡೆಸುವುದು ಸೂಕ್ತ. ಎಸ್ಐಟಿಗೆ ವಹಿಬೇಕಾದರೆ ಪಿರ್ಯಾದುದಾರರಿಬೇಕು. ಎಫ್ಐಆರ್ ದಾಖಲಾಗುತ್ತಿದ್ದಂತೆ ಆರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕಾಗುತ್ತದೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರ ವಿರುದಟಛಿದ ಪ್ರಕರಣವೊಂದರಲ್ಲಿ ಎಸ್ಐಟಿ ತನಿಖೆಗೆ ತಡೆಯಾಜ್ಞೆಯಿದ್ದು, ಈವರೆಗೆ ಇತ್ಯರ್ಥವಾಗಿಲ್ಲ. ಸಿಆರ್ಪಿಸಿ ಸೆಕ್ಷನ್ನಡಿ ದಾಖಲಾಗುವ ಪ್ರಕರಣಗಳನ್ನು ಮೂರನೇ ಸಂಸ್ಥೆಯ ತನಿಖೆಗೆ ಒಳಪಡಿಸಲು ಅವಕಾಶವಿಲ್ಲ’ ಎಂದು ಹೇಳಿದರು.
Related Articles
Advertisement
ಬಿಜೆಪಿಯ ಎಸ್.ಸುರೇಶ್ ಕುಮಾರ್, ಈ ರೀತಿಯ ಪ್ರಕರಣಗಳ ತನಿಖೆಗೆಂದೇ ಹಕ್ಕುಬಾಧ್ಯತಾ ಸಮಿತಿ ಇದೆ. ಆ ಸಮಿತಿಯಿಂದ 15 ದಿನದಲ್ಲೇ ವರದಿ ಪಡೆಯಲಿ. ಅಗತ್ಯಬಿದ್ದರೆ ತಜ್ಞರನ್ನು ಆಹ್ವಾನಿಸಿ ಅಭಿಪ್ರಾಯ ಪಡೆಯಲು ಅವಕಾಶವಿದೆ. ಎಸ್ಐಟಿ ತನಿಖೆಗೆ ವಹಿಸುವುದು ಒಳ್ಳೆಯ ಸಂಪ್ರದಾಯವಲ್ಲ. ಹಾಗಾಗಿ ಪುನರ್ ಪರಿಶೀಲಿಸಿ ಎಂದು ಮನವಿಮಾಡಿದರು.
ಸಚಿವ ಆರ್.ವಿ.ದೇಶಪಾಂಡೆ ಮಾತನಾಡಿ, “ಸಭಾಧ್ಯಕ್ಷರ ಸಲಹೆಯಂತೆ ಮುಖ್ಯಮಂತ್ರಿಗಳು ತನಿಖೆಗೆ ವಹಿಸಿದ್ದಾರೆ. ಹೀಗಿರುವಾಗ ಸಂದೇಹದ ಪ್ರಶ್ನೆ ಉದ್ಭವಿಸಿರುವುದು ಹೇಗೆ?. ಎಲ್ಲ ಪೊಲೀಸ್ಅಧಿಕಾರಿಗಳು ಸರ್ಕಾರದ ಕೈಗೊಂಬೆಗಳಲ್ಲ. ತಪ್ಪು ಮಾಡದಿದ್ದರೆ ಭಯವೇಕೆ’ ಎಂದು ಪ್ರಶ್ನಿಸಿದರು.
ನಾನೇ ಹೋಗಿ ಬಾ ಎಂದಿದ್ದೆ..“ಆಡಿಯೋದಲ್ಲಿ ಸಭಾಧ್ಯಕ್ಷರ ಹೆಸರು ಪ್ರಸ್ತಾಪವಾಗಿದ್ದು, ನನ್ನ ಮೇಲೆ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ನಮ್ಮ ಶಾಸಕರ ಪುತ್ರನಿಗೆ 25 ಬಾರಿ ಕರೆ ಮಾಡಿದ್ದು ಯಾರು? ಅವರು ಫೋನ್ ಮಾಡುವಂತೆ ನಾನು ಹೇಳಿದ್ದೆನಾ? ಆ ಸಂದರ್ಭದಲ್ಲಿ ಶಾಸಕರ ಪುತ್ರ ನನಗೆ ಕರೆ ಮಾಡಿ ಮಾಹಿತಿ ನೀಡಿದರು. ನಾನು ಹೋಗಿ ಬಾ ಎಂದಿದ್ದೆ. ಆ ದಿನ ಮಧ್ಯರಾತ್ರಿ 12 ಗಂಟೆಗೆ ಐಬಿಯಲ್ಲಿ ಚರ್ಚಿಸುವ ಅಗತ್ಯವೇನಿತ್ತು’ ಎಂದು ಸಿಎಂ ಕುಮಾರಸ್ವಾಮಿ ಪ್ರಶ್ನಿಸಿದರು. ಎಸ್.ಆರ್.ಬೊಮ್ಮಾಯಿ ಅವರನ್ನು ಅಧಿಕಾರ ದಿಂದ ತೆಗೆದಾಗ ರಾಜಭವನದಲ್ಲಿ ಆದ ನಿರ್ಣಯವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿದರು. ಆ ಬಳಿಕ ಶಾಸಕರ ಬೆಂಬಲವನ್ನು ಸದನದಲ್ಲೇ ಸಾಬೀತುಪಡಿಸಬೇಕೆಂಬ ವ್ಯವಸ್ಥೆ ಜಾರಿಗೆ ಬರಲು ಕರ್ನಾಟಕದ ಆ ಪ್ರಕರಣ ನಾಂದಿ ಹಾಡಿದ್ದು ಈಗ ಇತಿಹಾಸ ಎಂದು ಸ್ಮರಿಸಿದರು. ಮೈತ್ರಿ ಸರ್ಕಾರ ರಚನೆಯಾದಂದಿನಿಂದ ದೀಪಾವಳಿ, ಸಂಕ್ರಾಂತಿ, ಯುಗಾದಿಗೆ ಸರ್ಕಾರ ಪತನವಾಗಲಿದೆ ಎಂದು ಗಡುವು ನೀಡಿದ್ದು ನಾನೆ? ಶಾಸಕರು ಖರೀದಿ ವಸ್ತು ಎಂಬ ಸ್ಥಿತಿ ತಂದವರು ಯಾರು? ನೀವು (ಬಿಜೆಪಿ) ಹೇಳಿದ ಕಾಲಾವಧಿಯಿಂದಲೇ ತನಿಖೆ ಮಾಡೋಣ. ನನ್ನ ಮನೆಯಲ್ಲಿ ನನ್ನ ಪಕ್ಷದ ಕಾರ್ಯಕರ್ತರೊಂದಿಗೆ ನಡೆದ ಸಭೆಗೆ ಸಂಬಂಧಪಟ್ಟಂತೆ ಆಡಿಯೋವನ್ನು ತನಿಖೆ ನಡೆಸುವಂತೆ ಒತ್ತಾಯಿಸುತ್ತಿದ್ದಾರೆ. ತನಿಖೆ ನಡೆಯಲಿ. ಕೇಂದ್ರದಲ್ಲಿ ಅವರದೇ ಸರ್ಕಾರವಿದೆ. ಅದು 2014ರಲ್ಲಿ ನಡೆದ ಘಟನೆಯಾಗಿದ್ದು, ನಾನು ನನ್ನ ಪಕ್ಷದ ಕಾರ್ಯಕರ್ತರೊಂದಿಗೆ ನನ್ನ ಮನೆಯಲ್ಲಿ ಚರ್ಚಿಸಿದ್ದೇನೆ. ನೀವು ಯಾರೊಂದಿಗೆ ಚರ್ಚೆ ನಡೆಸಿದ್ದೀರಿ? ಆ ಘಟನೆಗೂ ಇತ್ತೀಚಿನ ಆಡಿಯೋಗೂ ಹೋಲಿಕೆ ಏಕೆ ಎಂದು ಪ್ರಶ್ನಿಸಿದರು. ಎಸ್ಐಟಿಯಿಂದಲೇ ತನಿಖೆಯಾಗಲಿ ಆಪರೇಷನ್ ಆಡಿಯೋ ಪ್ರಕರಣ ಸದನದ ಆಸ್ತಿಯಾಗಿರುವುದರಿಂದ ಈ ಬಗ್ಗೆ ಸಂಪೂರ್ಣ ಸತ್ಯ ಹೊರಬರಬೇಕಾದರೆ, ಎಸ್ಐಟಿಯಿಂದಲೇ ತನಿಖೆ ನಡೆಸಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದರು. ಪ್ರಕರಣ ಕುರಿತು ನಡೆದ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಶರಣುಗೌಡ ಮುಖ್ಯಮಂತ್ರಿಗೆ ಟೇಪ್ ಕೊಟ್ಟಾಗ ಅದನ್ನು ಬಹಿರಂಗಗೊಳಿಸದಿರುವುದು ಅಪರಾಧ ಆಗುತ್ತದೆ. ಆ ಕಾರಣಕ್ಕಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಬಹಿರಂಗಗೊಳಿಸಿದ್ದಾರೆ. ಅಲ್ಲದೇ ಈಗಾಗಲೇ ಸದನದಲ್ಲಿ ಚರ್ಚೆಯಾಗಿ ಸ್ಪೀಕರ್ ಸಲಹೆ ಮೇರೆಗೆ ಎಸ್ಐಟಿ ತನಿಖೆ ನಡೆಸಲು ಮುಖ್ಯಮಂತ್ರಿ ಆದೇಶ ನೀಡಿದ್ದಾರೆ. ಸದನ ಸಮಿತಿ ಅಥವಾ ನ್ಯಾಯಾಂಗ ತನಿಖೆಯಿಂದ ಅಪರಾಧಿಗಳಿಗೆ ಶಿಕ್ಷೆ ಕೊಡಲು ಸಾಧ್ಯವಿಲ್ಲ. ಅವರು ಕೇವಲ ವರದಿ ಮಾತ್ರ ನೀಡುತ್ತಾರೆ. ಎಸ್ಐಟಿ ತನಿಖೆಯಿಂದ ಚಾರ್ಜ್ಶೀಟ್ ಸಲ್ಲಿಸಲು ಅವಕಾಶವಿದೆ. ಆದ್ದರಿಂದ ಎಸ್ ಐಟಿಯಿಂದಲೇ ತನಿಖೆಯಾಗಬೇಕು ಎಂದು ಆಗ್ರಹಿಸಿದರು. ಬಿಜೆಪಿಯ ಜೆ.ಸಿ.ಮಾಧುಸ್ವಾಮಿ ಇದಕ್ಕೆ ವಿರೋಧ ವ್ಯಕ್ತಪಡಿಸಿ, ಸದನದಲ್ಲಿ ಚರ್ಚಿಸುವ ಬದಲು ಯಾವುದಾದರೂ ಪೊಲೀಸ್ ಠಾಣೆಗೆ ದೂರು ನೀಡಿದ ನಂತರ ಆ ಪ್ರಕರಣದ ತನಿಖೆ ನಡೆಸಿ ಚಾರ್ಜ್ ಶೀಟ್ ಸಲ್ಲಿಸಿದ ನಂತರ ಕೋರ್ಟ್ಗೆ ಅದನ್ನ ಎಸ್ಐಟಿ ತನಿಖೆಗೆ ಸೂಚಿಸಬಹದು ಎಂದು ಹೇಳಿದರು. ಅವರ ವಾದಕ್ಕೆ ಸಿದ್ದರಾಮಯ್ಯ ತಿರುಗೇಟು ನೀಡಿದರು.