Advertisement

AAP ಮುಗಿಸಲು ಬಿಜೆಪಿ ಆಪರೇಷನ್‌ ಬಲೆ: ಕೇಜ್ರಿವಾಲ್ ಕಿಡಿ

01:09 AM May 20, 2024 | Team Udayavani |

ಹೊಸದಿಲ್ಲಿ: ಆಪ್‌ ಅನ್ನು ಮುಗಿಸಲು “ಆಪರೇಷನ್‌ ಝಾಡೂ ಆರಂಭಿಸಿದೆ ಎಂದು ದಿಲ್ಲಿ ಸಿಎಂ ಅರವಿಂದ್‌ ಕೇಜ್ರಿ ವಾಲ್‌ ಆರೋಪಿಸಿದ್ದಾರೆ. ರವಿವಾರ ಹೊಸದಿಲ್ಲಿಯಲ್ಲಿರುವ ಬಿಜೆಪಿ ಪ್ರಧಾನ ಕಚೇರಿಯತ್ತ ತೆರಳಿ “ಜೈಲ್‌ ಭರೋ’ ಹಮ್ಮಿಕೊಳ್ಳುವುದಕ್ಕಿಂತ ಮೊದಲು ಮಾತ ನಾಡಿದ ಅವರು, “ಪಕ್ಷದ ನಾಯಕರ ಬಂಧನ, ಬ್ಯಾಂಕ್‌ ಖಾತೆಗಳನ್ನು ಸ್ಥಗಿತ ಮಾಡುವುದು, ಕಚೇರಿಯನ್ನು ಕಸಿದು ಕೊಳ್ಳುವ ತಂತ್ರದ ಮೂಲಕ ಆಪ್‌ ಮುಗಿಸಲು ಮೋದಿ ಮುಂದಾಗಿದ್ದಾರೆ’ ಎಂದು ಆರೋಪಿಸಿದರು.

Advertisement

ಬಿಜೆಪಿ ಕಚೇರಿಯತ್ತ ನಡೆಯುತ್ತಿದ್ದ ಆಪ್‌ ಮೆರವಣಿಗೆಯನ್ನು ದಾರಿ ಮಧ್ಯೆ ಪೊಲೀಸರು ತಡೆದರು. ಈ ಸಂದರ್ಭ ದಲ್ಲಿ ಮಾತನಾಡಿದ ಸಂಸದ ಸಂಜಯ್‌ ಸಿಂಗ್‌, “ಪ್ರಧಾನಿ ಮೋದಿ ಹೆದರಿದ್ದಾರೆ. ಹೀಗಾಗಿಯೇ ಕಾರ್ಯಕರ್ತರನ್ನು ಬಂಧಿ  ಸಲು ಪೊಲೀಸರಿಗೆ ಆದೇಶ ನೀಡಿಲ್ಲ. ಹಾಗಾಗಿ ಪ್ರತಿಭಟನೆ ಮುಕ್ತಯ ವಾಗಿದೆ’ ಎಂದು ಘೋಷಿಸಿದರು.

ಈ ಮಧ್ಯೆ ಆಪ್‌ ಸಂಸದೆ ಸ್ವಾತಿ ಮಲಿವಾಲ್‌ ಮೇಲಿನ ಹಲ್ಲೆ ಪ್ರಕರಣ ದಲ್ಲಿ ದಿಲ್ಲಿ ಸಿಎಂ ಕೇಜ್ರಿವಾಲ್‌ ಅವರ ಆಪ್ತ ಸಹಾಯಕ ಬಿಭವ್‌ ಕುಮಾರ್‌ ಅವರನ್ನು ವಿಚಾರಣೆಗಾಗಿ 5 ದಿನಗಳ ಕಾಲ ವಶಕ್ಕೆ ಪಡೆಯಲು ದಿಲ್ಲಿ ಕೋರ್ಟ್‌ ಪೊಲೀಸರಿಗೆ ಅನುಮತಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next