Advertisement

BJP: ಪ್ರಚಾರಕ್ಕೆ ಬರದ, ವೋಟ್‌ ಮಾಡದ ಕೇಂದ್ರ ಸಚಿವ ಸಿನ್ಹಾಗೆ ಬಿಜೆಪಿ ನೋಟಿಸ್‌

09:36 PM May 21, 2024 | Team Udayavani |

ನವದೆಹಲಿ: ಪಕ್ಷದ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳದೇ, ಪ್ರಚಾರಕ್ಕೂ ಬರದೇ, ಚುನಾವಣೆಯಲ್ಲಿ ಮತದಾನವನ್ನೂ ಮಾಡದ  ಕೇಂದ್ರ ಸಚಿವ ಜಯಂತ್‌ ಸಿನ್ಹಾ ಅವರಿಗೆ ಬಿಜೆಪಿ ಶೋಕಾಸ್‌ ನೋಟಿಸ್‌ ನೀಡಿದೆ.

Advertisement

ಜಾರ್ಖಂಡ್‌ನ‌ ಹಜಾರಿಬಾಗ್‌ ಲೋಕಸಭಾ ಕ್ಷೇತ್ರದಿಂದ ಸಂಸದ ಸಿನ್ಹಾ ಅವರ ಬದಲಿಗೆ ಮನೀಶ್‌ ಜೈಸ್ವಾಲ್‌ ಅವರಿಗೆ ಬಿಜೆಪಿ ಟಿಕೆಟ್‌ ನೀಡಿತ್ತು. ಅಂದಿನಿಂದ ಪಕ್ಷದ ಸಂಘಟನೆ, ಚುನಾವಣೆ ಪ್ರಚಾರದಿಂದ ದೂರ ಉಳಿದ ಸಿನ್ಹಾ, ಚುನಾವಣೆ ದಿನದಂದು ಮತದಾನವನ್ನೂ ಮಾಡಿರಲಿಲ್ಲ.

ಪಕ್ಷದ ಕಾರ್ಯದಲ್ಲಿ ಸಿನ್ಹಾ ಯಾವುದೇ ಆಸಕ್ತಿ ಹೊಂದಿಲ್ಲ. ಜತೆಗೆ ಮತದಾನ ಮಾಡದಿರುವುದು ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗಿದೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಆದಿತ್ಯ ಸಾಹು ನೋಟಿಸ್‌ನಲ್ಲಿ ತಿಳಿಸಿದ್ದಾರೆ. 2 ದಿನಗಳಲ್ಲಿ ತಮ್ಮ ಈ ನಡೆ ಕುರಿತು ಸಮರ್ಥನೆ ನೀಡುವಂತೆ ಪಕ್ಷ ಸಿನ್ಹಾ ಅವರಿಗೆ ಸೂಚಿಸಿದೆ. ಚುನಾವಣೆಗೆ ಸ್ಪರ್ಧಿಸಲ್ಲ ಎಂದು ಕಳೆದ ಮಾರ್ಚ್‌ನಲ್ಲಿ ಸಿನ್ಹಾ ಘೋಷಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next