Advertisement

ಜೆಹಾದಿಗಳಿಂದ ಬೆದರಿಕೆ ಕರೆ: ಶೋಭಾ

09:48 PM May 05, 2020 | Sriram |

ಉಡುಪಿ: ಜೆಹಾದಿಗಳು ನಿರಂತರವಾಗಿ ಬೆದರಿಕೆ ಕರೆಗಳನ್ನು ಒಡ್ಡುತ್ತಿದ್ದಾರೆಂದು ಸಂಸದೆ ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ.

Advertisement

ಮಸ್ಕತ್‌ನಲ್ಲಿ ಹಿಂದೂ ಒಬ್ಬನಿಗೆ ಜೆಹಾದಿಗಳು ಕಪಾಳ ಮೋಕ್ಷ ಮಾಡಿದಾಗ ನಾನು ಗಂಭೀರವಾಗಿ ಪರಿಗಣಿಸಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರಿಗೆ ಪತ್ರ ಬರೆದೆ. ಅನಂತರ ದುಬಾೖ, ಮಸ್ಕತ್‌ ಹೀಗೆ ಮಧ್ಯಪ್ರಾಚ್ಯ ರಾಷ್ಟ್ರಗಳಿಂದ ನೂರಾರು ದೂರವಾಣಿ ಕರೆಗಳು ಬರುತ್ತಿವೆ. ಇವುಗಳಲ್ಲಿ ಬೆದರಿಕೆ, ಅಶ್ಲೀಲ ಕರೆಗಳಿವೆ.

ನಾನು ಕೋವಿಡ್-19 ಸಂತ್ರಸ್ತರಿಗಾಗಿ ನಿರಂತರ ಶ್ರಮಿಸುತ್ತಿರುವಾಗ ಸೋಮವಾರ ಬೆಳ್ಳಂಬೆಳಗ್ಗೆ ಇಂತಹುದೇ ಒಂದು ಕರೆ ಬಂತು. “ನನಗೆ ಗೊತ್ತಿಲ್ಲಪ್ಪಾ’ ಎಂದೆ. ಇದನ್ನೇ ವೈರಲ್‌ ಮಾಡುತ್ತಿದ್ದಾರೆ.

ಎರಡು ಮೂರು ವರ್ಷಗಳಿಂದ ನನ್ನನ್ನು ಟಾರ್ಗೆಟ್‌ ಮಾಡುತ್ತಿದ್ದಾರೆ. ಕೆಟ್ಟದಾಗಿ ಮಾತನಾಡಿದ ಕರೆಗಳ ಬಗ್ಗೆ ದಿಲ್ಲಿ ಪೊಲೀಸರಿಗೆ ದೂರು ನೀಡಿದ್ದೇನೆಂದು ಸಂಸದೆ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next