Advertisement

Ambedkar ಮತ್ತು ಸಂವಿಧಾನವನ್ನು ಅತಿಹೆಚ್ಚು ವಿರೋಧಿಸುವವರು ಬಿಜೆಪಿಯವರು: ಮೇವಾನಿ

07:49 PM Apr 14, 2024 | Team Udayavani |

ಹುಬ್ಬಳ್ಳಿ:ಡಾ.ಅಂಬೇಡ್ಕರ್ ಹಾಗೂ ಅವರು ರಚಿಸಿರುವ ಸಂವಿಧಾನವನ್ನು ಅತಿಹೆಚ್ಚು ವಿರೋಧಿಸುವವರು ಬಿಜೆಪಿಯವರು. ಅವರ ದೃಷ್ಟಿಯಲ್ಲಿ ದಲಿತರು ನಾಯಿಗೆ ಸಮಾನ ಎನ್ನುವಂತಾಗಿದೆ ಎಂದು ಗುಜರಾತ್ ನ ಶಾಸಕ ಜಿಗ್ನೇಶ ಮೇವಾನಿ ಆರೋಪಿಸಿದರು.

Advertisement

ಇಲ್ಲಿನ ನೆಹರು ಮೈದಾನದಲ್ಲಿ ಡಾ.ಅಂಬೇಡ್ಕರ್ ಜಯಂತಿ ಅಂಗವಾಗಿ ಕಾಂಗ್ರೆಸ್ ಆಯೋಜಿಸಿದ್ದ ವಿಶ್ವಮಾನವರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಡಾ.ಅಂಬೇಡ್ಕರ್ ಅಮೂಲ್ಯ ಸಂವಿಧಾನ ನೀಡಿದ್ದಾರೆ. ದೆಹಲಿಯಲ್ಲಿ ಬಿಜೆಪಿಯವರು ಸಂವಿಧಾನ ಪ್ರತಿ ಸುಟ್ಟರು ಮೋದಿಯವರು ಮಾತನಾಡಲಿಲ್ಲ.ಬಿಜೆಪಿ ಸಂಸದ ಅನಂತಕುಮಾರ ಹೆಗಡೆ ಸಂವಿಧಾನ ಬದಲಾಯಿಸುತ್ತವೇ ಎಂದಿದ್ದರು. ನಾಯಿ ಬೊಗಳುತ್ತಿರುತ್ತವೆ ನಾವು ತಲೆ ಕೆಡಸಿಕೊಳ್ಳುವುದಿಲ್ಲ ಎಂದರು.

ಒಂದು ಲಕ್ಷಕ್ಕೂ ಅಧಿಕ ದಲಿತ ಮಹಿಳೆಯರ ಮೇಲೆ ಅತ್ಯಾಚಾರವಾಗಿದ್ದು, ಮೋದಿ ಸರ್ಕಾರವನ್ನು ಕಿತ್ತೊಗೆಯಬೇಕಾಗಿದೆ ಎಂದರು. ದಲಿತ,ಆದಿವಾಸಿಗಳ ಸಂಖ್ಯೆ ಅಧಿಕವಾಗಿದ್ದರೂ ನಿರೀಕ್ಷಿತ ಸೌಲಭ್ಯ ಸಿಗುತ್ತಿಲ್ಲವಾಗಿದ್ದು, ಅದಕ್ಕಾಗಿಯೇ ಕಾಂಗ್ರೆಸ್ ಜಾತಿ ಗಣತಿ ಮಾಡುವುದಾಗಿ ಹೇಳುತ್ತಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next