Advertisement

ಕೋವಿಡ್ ನಿಯಂತ್ರಣಕ್ಕೆ ಗೋಮೂತ್ರವೇ ರಾಮಬಾಣ ಎಂದ ಬಿಜೆಪಿ ಶಾಸಕ: ವಿಡಿಯೋ ವೈರಲ್

09:42 AM May 08, 2021 | Team Udayavani |

ಲಕ್ನೋ: ಕೋವಿಡ್-19 ಸೋಂಕು ನಿಯಂತ್ರಣಕ್ಕೆ ಸರ್ಕಾರ  ಹಲವು ಕ್ರಮಗಳನ್ನು ಕೈಗೊಂಡಿದೆ. ದೇಶಾದ್ಯಂತ ಲಸಿಕೆ ನೀಡುವ ಕಾರ್ಯವೂ ಜಾರಿಯಲ್ಲಿದೆ. ಈ ನಡುವೆ ಉತ್ತರ ಪ್ರದೇಶದ ಬಿಜೆಪಿ ಶಾಸಕನೋರ್ವ ಕೋವಿಡ್ ಸೋಂಕು ನಿಯಂತ್ರಣಕ್ಕೆ ಗೋ ಮೂತ್ರವೇ ರಾಮಬಾಣ ಎಂದು ಹೇಳಿದ್ದು, ಜನರೆದುರೇ ಗೋ ಮೂತ್ರ ಕುಡಿದಿದ್ದು, ವಿಡಿಯೋ ವೈರಲ್ ಆಗಿದೆ.

Advertisement

ಉತ್ತರ ಪ್ರದೇಶದ ಬಲಿಯಾ ಜಿಲ್ಲೆಯ ಬೈರಿಯಾ ಕ್ಷೇತ್ರದ ಶಾಸಕ ಸುರೇಂದ್ರ ಸಿಂಗ್ ಈ  ಸಲಹೆ ನೀಡಿದವರರು. ಇವರ ವಿಡಿಯೋ ಇದೀಗ ವೈರಲ್ ಆಗುತ್ತಿದೆ.

ಇದನ್ನೂ ಓದಿ:ಚೀನಾದ ಸಿನೋಫಾರ್ಮ್ ಲಸಿಕೆಗೆ ತುರ್ತು ಬಳಕೆಗೆ ಅನುಮತಿ ನೀಡಿದ ಆರೋಗ್ಯ ಸಂಸ್ಥೆ

ಗೋ ಮೂತ್ರವನ್ನು ಹೇಗೆ ಕುಡಿಯಬೇಕೆಂದು ಜನರಿಗೆ ತೋರಿಸಿರುವ ವಿಡಿಯೋವನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಅಷ್ಟೇ ಅಲ್ಲದೆ ತಾನೂ ಗೋ  ಮೂತ್ರ ಕುಡಿದು ಆರೋಗ್ಯವಾಗಿದ್ದೇನೆ. ಜನರಿಗಾಗಿ 18 ಗಂಟೆಗಳ ಕಾಲ ಕೆಲಸ ಮಾಡಿದರೂ ನನ್ನ ಆರೋಗ್ಯದ ಗುಟ್ಟು ಗೋ ಮೂತ್ರ ಎಂದು ಸುರೇಂದ್ರ ಸಿಂಗ್ ಹೇಳಿದ್ದಾರೆ.

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಗೋಮೂತ್ರ ತೆಗೆದುಕೊಳ್ಳಬೇಕು. ಎರಡರಿಂದ ಮೂರು ಮುಚ್ಚಳ​ ಗೋಮೂತ್ರ ತೆಗೆದುಕೊಂಡು ಅದನ್ನು ಒಂದು ಗ್ಲಾಸ್​ ನೀರಿನಲ್ಲಿ ಬೆರೆಸಿ ಕುಡಿಯಬೇಕೆಂದು ಬಿಜೆಪಿ ಶಾಸಕ ಸಿಂಗ್ ವಿಡಿಯೋದಲ್ಲಿ ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next