Advertisement

ಸಬ್‌ ಕಾ ವಿಶ್ವಾಸ್‌ ಸೇ ಕಾಂಗ್ರೆಸ್‌ ಸರ್ವನಾಶ್‌: ಬೋಪಯ್ಯ

09:26 PM Mar 15, 2022 | Team Udayavani |

ವಿಧಾನಸಭೆ: ಬಿಜೆಪಿ ಘೋಷವಾಕ್ಯ ಸಬ್‌ ಕಾ ಸಾಥ್‌, ಸಬ್‌ ಕಾ ವಿಕಾಸ್‌, ಸಬ್‌ ಕಾ ವಿಶ್ವಾಸ್‌ ಸೇ ಕಾಂಗ್ರೆಸ್‌ ಸರ್ವನಾಶ್‌ ಮಾಡುವುದಾಗಿ ಬಿಜೆಪಿ ಶಾಸಕ ಕೆ.ಜಿ. ಬೋಪಯ್ಯ ಹೇಳಿದರು.

Advertisement

ವಿಧಾನಸಭೆಯಲ್ಲಿ ಬಜೆಟ್‌ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಮಂಡಿಸಿರುವ ಬಜೆಟ್ಟನ್ನು ಎಲ್ಲರೂ ಸ್ವಾಗತಿಸಿದಾಗ ಪ್ರತಿಪಕ್ಷದ ನಾಯಕರು ಏಕೆ ವಿರೋಧ ಮಾಡಿದ್ದಾರೊ ಗೊತ್ತಿಲ್ಲ. ಪ್ರಧಾನಿ ಮೋದಿ ಅವರ ಘೋಷವಾಕ್ಯದಂತೆ ಸಬ್‌ ಕಾ ಸಾಥ್‌, ಸಬ್‌ಕಾ ವಿಕಾಸ್‌, ಸಬ್‌ ಕಾ ವಿಶ್ವಾಸ, ಅನ್ನುವ ಮಾತನ್ನು ಸಿದ್ದರಾಮಯ್ಯ ಸಬ್‌ ಕಾ ಸರ್ವ ನಾಶ್‌ ಅಂತ ಹೇಳಿದ್ದರು. ಅದನ್ನು ನಾನು ಬದಲಾಯಿಸಿ ಸಬ್‌ ಕಾ ಸಾಥ್‌, ಸಬ್‌ ಕಾ ವಿಕಾಸ್‌, ಸಬ್‌ ಕಾ ವಿಶ್ವಾಸ್‌ ಸೇ ಕಾಂಗ್ರೆಸ್‌ ಕೊ ಸರ್ವ್‌ ನಾಶ್‌ ಮಾಡುವುದಾಗಿ ಹೇಳಿದರು.

ಅವರ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿದ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಸಬ್‌ ಕಾ ಸಾಥ್‌, ಸಬ್‌ ಕಾ ವಿಶ್ವಾಸ್‌, ಬಿಜೆಪಿ ಸರ್ವನಾಶ್‌ ಆಗುತ್ತೆ ಅಂತ ತಿರುಗೇಟು ನೀಡಿದರು.

ಬಿಜೆಪಿಯವರು ಭ್ರಮೆಯಲ್ಲಿದ್ದೀರಿ, ರಾಜ್ಯದ ಜನರ ನಾಡಿ ಮಿಡಿತ ನೀವು ಅರಿತಿಲ್ಲ. ನೀವು ಕೇವಲ ಕೊಡಗು ಜಿಲ್ಲೆ ನೋಡಿಕೋಂಡು ಮಾತನಾಡುತ್ತಿದ್ದೀರಿ ಎಂದರು. ಅದಕ್ಕೆ ಪ್ರತಿಕ್ರಿಯಿಸಿ ಭೋಪಯ್ಯ, ಕೊಡಗು ಜಿಲ್ಲೆಯಲ್ಲಿ ಕಾಂಗ್ರೆಸ್‌ ಎಲ್ಲಿದೆ ಅಂತ ಹುಡುಕಬೇಕು, ಈಗಾಗಲೇ ಕೊಡಗಿನಲ್ಲಿ ಕಾಂಗ್ರೆಸ್‌ ಸರ್ವನಾಶವಾಗಿದೆ. ಮಲೆನಾಡು, ಕರಾವಳಿಯಲ್ಲಿ ಕಾಂಗ್ರೆಸ್‌ ನಾಶವಾಗಿದೆ. ಮುಂದಿನ ಬಾರಿ ಸಿದ್ದರಾಮಯ್ಯ ಊರಲ್ಲಿ, ಬಯಲು ಸೀಮೆಯಲ್ಲಿಯೂ ಸರ್ವನಾಶವಾಗಲಿದೆ ಎಂದರು.

ಈ ಸಂದರ್ಭದಲ್ಲಿ ಕಾಂಗ್ರೆಸ್‌ ಸದಸ್ಯ ಕೆ.ಜೆ. ಜಾರ್ಜ್‌ ಪ್ರತಿ ಸಾರಿ ಕೊಡಗಿನವರಿಗೆ ಮಂತ್ರಿ ಮಾಡುತ್ತಿದ್ದರು. ಈಗ ನಿಮ್ಮನ್ನು ಮಂತ್ರಿ ಮಾಡಿಲ್ಲ ಎಂದರು. ನಾವು ಮಂತ್ರಿ ಆಗದಿದ್ದರೂ ಕೊಡಗು ಅಭಿವೃದ್ಧಿ ಆಗುತ್ತಿದೆ. ಸಿಎಂ ನಮಗೆ ಎಲ್ಲ ರೀತಿಯ ಅಭಿವೃದ್ಧಿಗೆ ಅನುದಾನ ನೀಡುತ್ತಿದ್ದಾರೆ ಎಂದು ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next