Advertisement

ಸರ್ಕಾರಿ ಸಂಸ್ಥೆಯನ್ನು ಬಿಜೆಪಿ ದುರುಪಯೋಗಪಡಿಸುತ್ತಿದೆ: ದಿನೇಶ್ ಗುಂಡೂರಾವ್

05:41 PM Aug 30, 2019 | Team Udayavani |

ಬೆಂಗಳೂರು: ಸರ್ಕಾರಿ ಸಂಸ್ಥೆಗಳನ್ನು ಬಿಜೆಪಿ ಮುಂಚೂಣಿ ಘಟಕಗಳ ರೀತಿ ದುರುಪಯೋಗ ಪಡಿಸಿಕೊಳ್ಳುತ್ತಿದೆ.ತಮ್ಮ ರಾಜಕೀಯ ಲಾಭಕ್ಕೋಸ್ಕರ ಇಂಥ ಸಂಸ್ಥೆಗಳ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

Advertisement

ನಿಷ್ಪಕ್ಷಪಾತವಾಗಿ ಯೋಚನೆ ಮಾಡುವವರಿಗೆ ಇದು ಎದ್ದು ಕಾಣುತ್ತದೆ.ಬಿಜೆಪಿ ವಿರುದ್ದದ ಸಿದ್ದಾಂತ, ‌ಅಭಿಪ್ರಾಯ ಹೊಂದಿರುವವರನ್ನು ಉದ್ದೇಶಪೂರ್ವಕವಾಗಿ ಗುರಿಯಾಗಿಟ್ಟುಕೊಂಡು ಅವರ ಮೇಲೆ ಎಲ್ಲ ರೀತಿಯ ಸುಳ್ಳು ಆರೋಪಗಳನ್ನು ಸೃಷ್ಡಿ ಮಾಡಿ ಅಂಥವರ ನಡವಳಿಕೆಯನ್ನೇ ಕೊಲ್ಲುವಂತ, ರಾಜಕೀಯವಾಗಿ ಮುಗಿಸುವ ಅಜೆಂಡಾ ಕಾರ್ಯಕ್ರಮ ಬಿಜೆಪಿದ್ದು.

ಕರ್ನಾಟಕದಲ್ಲೇ ಇದಕ್ಕೆ ನೂರಾರು ಉದಾಹರಣೆಗಳಿವೆ…ಡಿಕೆಶಿ, ಎಂಟಿಬಿ, ಶಾಮನೂರು, ಗೋವಿಂದರಾಜು ಸೇರಿ ಹಲವಾರು ಜನರ ಮೇಲೆ ಇನಕಂ ಟ್ಯಾಕ್ಸ್ ನ್ನು ಯುದ್ದದ ರೀತಿ ಬಳಸಲಾಗುತ್ತಿದೆ. ಕೇಂದ್ರದ ನೀಚ ಕೃತ್ಯದ ವಿರುದ್ಧ ಕಾಂಗ್ರೆಸ್ ಒಟ್ಟಾಗಿ ಹೋರಾಟ ಮಾಡುತ್ತದೆ. ಕಾಂಗ್ರೆಸ್‌ ಪಕ್ಷ ಡಿ.ಕೆ.ಶಿವಕುಮಾರ್ ಬೆನ್ನಿಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next