Advertisement

BJP; ಕೈತಪ್ಪಿದ ಟಿಕೆಟ್: ಸಂಸದ ಸಂಗಣ್ಣ ಕರಡಿ ಬೆಂಬಲಿಗರ ಆಕ್ರೋಶ

09:18 PM Mar 13, 2024 | Team Udayavani |

ಕೊಪ್ಪಳ: ಬಿಜೆಪಿ ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ಬಿಜೆಪಿ ಸಂಸದ ಸಂಗಣ್ಣ ಕರಡಿ ಅವರ ನಿವಾಸ ದತ್ತ ಕಾರ್ಯಕರ್ತರು, ಬೆಂಬಲಿಗರು ದೌಡಾಯಿಸಿ ಆಕ್ರೋಶ ಹೊರ ಹಾಕಿದ್ದಾರೆ.

Advertisement

ಕೊಪ್ಪಳ ನಗರದಲ್ಲಿರುವ ಸಂಗಣ್ಣ ಕರಡಿ ನಿವಾಸಕ್ಕೆ ಆಗಮಿಸಿದ ಬೆಂಬಲಿಗರು ಬೇಸರ ವ್ಯಕ್ತಪಡಿದ್ದಾರೆ. ಸಂಗಣ್ಣ ಅವರ ಬೆಂಬಲಿಗರಿಗೆ ಟಿಕೆಟ್ ನೀಡಿದರೆ ಮಾತ್ರ ನಾವು ಬಿಜೆಪಿಗೆ ಮತ ಹಾಕುತ್ತೇವೆ. ಇಲ್ಲದಿದ್ದರೆ ನಾಳೆ ಪ್ರತಿಭಟನೆ ಮಾಡುತ್ತೇವೆ. ಸಂಗಣ್ಣ ಅಭಿಮಾನಿಗಳು ಮತ್ತು ಪದಾಧಿಕಾರಿಗಳು ಪಕ್ಷಕ್ಕೆ ರಾಜಿನಾಮೆ ನೀಡಬೇಕು ಎಂದು ಆಕ್ರೋಶ ಹೊರ ಹಾಕಿದ್ದಾರೆ.

ಕೊಪ್ಪಳದ ಕೆಲವು ಆರ್ ಎಸ್ ಎಸ್ ಮುಖಂಡರು ಹಣ ಪಡೆದು ಡಾ.ಬಸವರಾಜ ಕ್ಯಾವಟರ್ ಅವರಿಗೆ ಟಿಕೆಟ್ ಕೊಡಿಸಿದ್ದಾರೆ. ಡಾ.ಬಸವರಾಜ ಕ್ಯಾವಟರ್ ಯಾರಿಗೂ ಗೊತ್ತಿಲ್ಲ. ಅವರು ಮತ ಕೇಳಲು ಬರಲಿ ನಾವು ಹೊಡೆದು ಕಳಿಸುತ್ತೇವೆ. ಜಿಲ್ಲೆಯಲ್ಲಿ ಕೋವಿಡ್ ಸಮಯದಲ್ಲಿ ಡಾ ಬಸವರಾಜ ಜನರ ಕತ್ತು ಕೊಯ್ದಿದ್ದಾರೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next