Advertisement

ರೈತ ವಿರೋಧಿ ನೀತಿಯಿಂದಾಗಿ 3 ರಾಜ್ಯಗಳಲ್ಲಿ ಬಿಜೆಪಿ ಸೋಲು: ಕಾಂಗ್ರೆಸ್‌

04:37 PM Dec 12, 2018 | udayavani editorial |

ಭುವನೇಶ್ವರ : ರೈತ ವಿರೋಧಿ ನೀತಿಯಿಂದಾಗಿಯೇ ಬಿಜೆಪಿ ಪಂಚ ರಾಜ್ಯ ಚುನಾವಣೆಯಲ್ಲಿ ಸೋಲುಂಡಿದೆ: ರೈತರ ಸಮಸ್ಯೆಗೆ ಸ್ಪಂದಿಸುವಲ್ಲಿ ವಿಫ‌ಲವಾಗಿರುವ ಒಡಿಶಾದಲ್ಲಿನ ಆಳುವ ಬಿಜೆಡಿ ಸರಕಾರಕ್ಕೆ ಕೂಡ ಇದೇ ಗತಿ ಆಗಲಿದೆ ಎಂದು ರಾಜ್ಯ ಕಾಂಗ್ರೆಸ್‌ ಘಟಕ ಎಚ್ಚರಿಕೆ ನೀಡಿದೆ.

Advertisement

ಕಾಂಗ್ರೆಸ್‌ ಪಕ್ಷ ಇಂದು ಬುಧವಾರ ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢದಲ್ಲಿ ಹೊಸ ಸರಕಾರ ರಚಿಸುವ ಸಿದ್ಧತೆಯಲ್ಲಿದೆ.

ಇಂದಿಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದ ಒಡಿಶಾ ಪಿಸಿಸಿ ಅಧ್ಯಕ್ಷ ನಿರಂಜನ್‌ ಪಟ್ನಾಯಕ್‌ ಅವರು,  ಕಾಂಗ್ರೆಸ್‌ ಜಯಿಸಿರುವ ಮೂರು ರಾಜ್ಯಗಳಲ್ಲಿ ರೈತರ ಸಮಸ್ಯೆಯೇ ಮುಖ್ಯವಾಗಿತ್ತು; ಅಂತೆಯೇ ಮತದಾನದಲ್ಲಿ ಅದು ಪ್ರಮುಖ ಪಾತ್ರ ವಹಿಸಿತು ಎಂದು ನಿರಂಜನ್‌ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next