Advertisement

ಗೆದ್ದವರಂತೆ ಬೀಗುತ್ತಿರುವ ಬಿಜೆಪಿ ನಾಯಕರು

12:23 PM Mar 26, 2017 | Team Udayavani |

ಬೆಂಗಳೂರು/ಯಲಹಂಕ: ರಾಜ್ಯದಲ್ಲಿ ಒಬ್ಬ ಕೃಷ್ಣ ಬಿಜೆಪಿಗೆ ಸೇರಿದ್ದರಿಂದ ಈಗಾಗಲೇ 175 ಸ್ಥಾನ ಗೆದ್ದವರಂತೆ ಬಿಜೆಪಿಯವರು ಬೀಗುತ್ತಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ನರೇಂದ್ರಮೋದಿ, ಎಲ್‌.ಕೆ. ಅಡ್ವಾ­ಣಿಯೇ ಬಂದು ಪ್ರಚಾರ ಮಾಡಿ­ದರೂ ಬಿಜೆಪಿ ಗೆದ್ದಿದ್ದು ಬರೀ 40 ಸೀಟು ಎಂಬುದನ್ನು ಅರ್ಥಮಾಡಿಕೊಳ್ಳಬೇಕು,” ಎಂದು ಮಾಜಿ ಪ್ರಧಾನಿ ದೇವೇಗೌಡರು ಬಿಜೆಪಿ ನಾಯಕರ ನಡೆಯನ್ನು ವ್ಯಂಗ್ಯ ಮಾಡಿದ್ದಾರೆ. 

Advertisement

 ಚಿಕ್ಕಬೊಮ್ಮಸಂದ್ರದಲ್ಲಿ ಶನಿವಾರ ಮಹಾನಗರ ಯುವ ಜನತಾದಳ ಆಯೋಜಿಸಿದ್ದ “ಯುವೋತ್ಸವ’ ಉದ್ಘಾಟಿಸಿ ಮಾತನಾಡಿದ ಅವರು, “”ಜೆಡಿಎಸ್‌ ಪಕ್ಷ ಕಟ್ಟುವುದರಲ್ಲಿ ಪ್ರಮುಖ ಪಾತ್ರ ವಹಿಸಿರುವ ಯುವ ಕಾರ್ಯಕರ್ತರು ಜನರ ಮನ ಪರಿವರ್ತಿಸಬೇಕು. ನಾವು ಅಧಿಕಾರದಲ್ಲಿದ್ದಾಗ ಮಾಡಿದ ಸಾಧನೆ­ಗಳನ್ನು ತಿಳಿಸಬೇಕು. ಮುಂದೆ ಪಕ್ಷಕ್ಕೆ ಒಳ್ಳೆಯ ದಿನಗಳು ಬರಲಿದ್ದು, ಕುಮಾರಸ್ವಾಮಿ ಮುಖ್ಯಮಂತ್ರಿಯಾಗುತ್ತಾರೆ,” ಎಂದು ತಿಳಿಸಿದರು. 

“ಉತ್ತರಪ್ರದೇಶದಲ್ಲಿ ಬಿಜೆಪಿ ಗೆದ್ದ ಮಾತ್ರಕ್ಕೆ ಇಡೀ ಹಿಂದೂಸ್ಥಾನವೇ ತನ್ನ ಕೈಯಲ್ಲಿದೆ ಅಂದುಕೊಳ್ಳಬಾರದು. ರಾಜ್ಯದಲ್ಲಿ ಜೆಡಿಎಸ್‌ ಪಕ್ಷ ಇನ್ನೂ ಇದೆ. ನಾನೂ ಜೀವಂತ ಇದ್ದೇನೆ. ರಾಜ್ಯದಲ್ಲಿ ಅಧಿಕಾರ ನಡೆಸಿದ ಬಿಜೆಪಿ ಏನೇನು ಮಾಡಿದೆ ಎಂಬುದ ಜನರಿಗೆ ಗೊತ್ತಿದೆ,” ಎಂದು ತಿಳಿಸಿದರು. “”ಉತ್ತರಪ್ರದೇಶದಲ್ಲಿ ನಡೆದಂತೆ ಇಲ್ಲಿಯೂ ನಡೆಯಲಿದೆ ಎಂಬುದು ಊಹೆ. ಕರ್ನಾಟದಲ್ಲಿ ಆ ರೀತಿ ರಾಜಕಾರಣ ನಡೆಯುವುದಿಲ್ಲ.

ಜೆಡಿಎಸ್‌ ಕಾರ್ಯಕರ್ತರು ಮುಂ­ದಿನ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಬೇಕು,” ಎಂದು ಕರೆ ನೀಡಿದರು. “ಉತ್ತರ ಪ್ರದೇಶದಲ್ಲಿ ಮುಸ್ಲಿಮರ ಕಸಾಯಿಖಾನೆಗಳನ್ನು ಮುಚ್ಚಿಸಿರುವ ಬಿಜೆಪಿ ಸರ್ಕಾರ, ಅಲ್ಪಸಂಖ್ಯಾತರು ದೇಶ ಬಿಟ್ಟುಹೋಗುವಂತೆ ಮಾಡುವ ಹುನ್ನಾರ ನಡೆಸಿದೆ ,” ಎಂದು ಆರೋಪಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next