Advertisement

BJP ಮುಖಂಡ ನೀಲಕಂಠರಾಯ ಯಲ್ಹೇರಿ ರಸ್ತೆ ಅಪಘಾತದಲ್ಲಿ ನಿಧನ

09:38 PM Jan 01, 2024 | Team Udayavani |

ಯಾದಗಿರಿ:  ವಿಕಾಸ ಅಕಾಡೆಮಿಯ ಜಿಲ್ಲಾ ಸಂಚಾಲಕ ಹಾಗೂ ಬಿಜೆಪಿ ಪಕ್ಷದ ಸಂಘಟಕರಾಗಿದ್ದ ನೀಲಕಂಠರಾಯ ಯಲ್ಹೇರಿ (54) ಸೋಮವಾರ ತಾಲೂಕಿನ ಅರಕೇರಾ .ಕೆ ಗ್ರಾಮದ ಹತ್ತಿರ ಸಂಭವಿಸಿದ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.

Advertisement

ತಮ್ಮ ಸ್ವಗ್ರಾಮ ಯಲ್ಹೇರಿಯಿಂದ ಸಂಜೆ 4ಗಂಟೆಗೆ ಬೈಕ್ ನಲ್ಲಿ ಯಾದಗಿರಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ಎದುರಿನಿಂದ ವೇಗವಾಗಿ ಬಂದ ಕ್ರೂಸರ್ ಬೈಕಗೆ ಢಿಕ್ಕಿಯಾದ ಪರಿಣಾಮ ಅಪಘಾತದಲ್ಲಿ ತೀವ್ರ ಗಾಯಗೊಂಡ ಯಲ್ಹೇರಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

ಮೃತರು ತಾಯಿ, ಇಬ್ಬರು ಸಹೋದರರು, ಪತ್ನಿ, ಇಬ್ಬರು ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.ಅಂತ್ಯಕ್ರಿಯೆ ಮಂಗಳವಾರ ಮಧ್ಯಾಹ್ನ 3 ಗಂಟೆಗೆ ಸ್ವಗ್ರಾಮ ಯಲ್ಹೇರಿಯಲ್ಲಿ ಜರುಗಲಿದೆ ಎಂದು ಕುಟುಂಬವರ್ಗದವರು ತಿಳಿಸಿದ್ದಾರೆ.

ನಿಧನಕ್ಕೆ ವಿಕಾಸ ಅಕಾಡೆಮಿಯ ಮುಖ್ಯಸ್ಥ ಡಾ. ಬಸರಾಜ ಪಾಟೀಲ್ ಸೇಡಂ, ಮಾಜಿ ಶಾಸಕರಾದ ನಾಗನಗೌಡ ಕಂದಕೂರ, ವೆಂಕಟರಡ್ಡಿ ಮುದ್ನಾಳ, ಶಾಸಕ ಶರಣಗೌಡ ಕಂದಕೂರ, ತೀವ್ರ ಸಂತಾಪ ಸೂಚಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next