Advertisement

ರಾಜ್ಯದಲ್ಲಿ 3 ಸಿಎಂಗಳಿದ್ದಾರೆ, ನಿಜವಾದ ಸಿಎಂ ಯಾರು? ಬಿಜೆಪಿ ಟಾಂಗ್

03:09 PM Aug 06, 2018 | Sharanya Alva |

ಬೆಂಗಳೂರು:ರಾಜ್ಯದಲ್ಲಿ ಹಾಲಿ ಮೂವರು ಮುಖ್ಯಮಂತ್ರಿಗಳು ಇದ್ದಾರೆ. ಹೀಗಾಗಿ ಸರ್ಕಾರ ಸಮರ್ಪಕವಾಗಿ ಯಾವಾಗ ಆಡಳಿತ ನಡೆಸುತ್ತದೆ ಎಂದು ಜನರು ಕಾಯುವಂತಾಗಿದೆ ಎಂಬುದಾಗಿ ಬಿಜೆಪಿ ಟ್ವೀಟ್ ಮಾಡುವ ಮೂಲಕ ಟಾಂಗ್ ನೀಡಿದೆ.

Advertisement

ಎಚ್ ಡಿ ಕುಮಾರಸ್ವಾಮಿ ಅವರು ದುರ್ಬಲ ಮುಖ್ಯಮಂತ್ರಿಯಾಗಿದ್ದಾರೆ. ಎಚ್ ಡಿ ರೇವಣ್ಣ ಸೂಪರ್ ಸಿಎಂ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ಸುಪ್ರೀಂ ಸಿಎಂ ಆಗಿದ್ದಾರೆ ಎಂದು ಟೀಕಿಸಿದೆ.

ಈ ಹಿನ್ನೆಲೆಯಲ್ಲಿ ಮೂವರು ಮುಖ್ಯಮಂತ್ರಿಗಳಿಂದಾಗಿ ಜನರು ಸಮರ್ಪಕ ಆಡಳಿತಕ್ಕಾಗಿ ಕಾಯುತ್ತಿದ್ದಾರೆ. ಆದ್ದರಿಂದ ನಿಜವಾಗಿಯೂ ರಾಜ್ಯದ ಮುಖ್ಯಮಂತ್ರಿ ಯಾರು ಎಂಬುದನ್ನು ಎಚ್.ಡಿ.ದೇವೇಗೌಡರ ಕುಟುಂಬ ಮೊದಲು ನಿರ್ಧರಿಸಲಿ ಎಂದು ಬಿಜೆಪಿ ಕರ್ನಾಟಕ ಟ್ವೀಟ್ ನಲ್ಲಿ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next