Advertisement

5 ವರ್ಷ ಪೂರೈಸಿದ್ದೇನಲ್ಲಾ.. ಬಿಜೆಪಿಯವರಿಗೆ ಹೊಟ್ಟೆಕಿಚ್ಚು 

02:42 PM Nov 20, 2017 | |

ಮಂಡ್ಯ: ಸಿದ್ದರಾಮಯ್ಯ 5 ವರ್ಷ ಆಡಳಿತ ಪೂರೈಸಿದ್ದಾನಲ್ಲ ಎಂದು ಬಿಜೆಪಿ ನಾಯಕರಿಗೆ ಹೊಟ್ಟೆಕಿಚ್ಚು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ತೀವ್ರ ವಾಗ್ದಾಳಿ ನಡೆಸಿದ್ದಾರೆ. 

Advertisement

ನಾಗಮಂಗಲದಲ್ಲಿ ಕಾಂಗ್ರೆಸ್‌ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಸಿಎಂ ‘ಈಶ್ವರಪ್ಪ ಇದ್ದಾನೆ ಅವ ಬುದ್ದಿ ಹೀನ, ಯಡಿಯೂರಪ್ಪ ಅಂತ ಇದ್ದಾನೆ ಅವನೂ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾನೆ ಕೇಂದ್ರ ಸಚಿವ ಅನಂತ್‌ ಕುಮಾರ್‌ ಹೆಗಡೆ ಇದ್ದಾನೆ ಅವನಿಗೆ ಹೇಗೆ ಮಾತನಾಡಬೇಕೆಂಬುದೇ ಗೊತ್ತಿಲ್ಲ, ಪಾರ್ಲಿಮೆಂಟರಿ ಲ್ಯಾಂಗ್ವೇಜ್‌ ಗೊತ್ತಿಲ್ಲ. ಅನಾಗರಿಕ ಮಾತುಗಳನ್ನಾಡುತ್ತಾನೆ’ ಎಂದರು. 

‘ಬಿಜೆಪಿಯವರು  ಹೀಗೆ ಮಾತನಾಡುವುದು ಯಾಕೆ ಗೊತ್ತಾ ? ಅವರಿಗೆ ಹೊಟ್ಟೆಕಿಚ್ಚು . ಸಿದ್ದರಾಮಯ್ಯ 5 ವರ್ಷ ಆಡಳಿತ ಪೂರ್ಣ ಮಾಡಿದನಲ್ಲಾ ಎಂದು. ಅವರ ಹೊಟ್ಟೆ ಕಿಚ್ಚು ಅವರನ್ನೇ ಸುಡುತ್ತದೆ. ನನಗೆ ರಾಜ್ಯದ ಜನ ಆಶೀರ್ವಾದ ಮಾಡುತ್ತಾರೆ’ಎಂದರು.

‘ನಾನು ಬಿಜೆಪಿ ನಾಯಕರ ಮಟ್ಟಕ್ಕೆ ಇಳಿದು ಮಾತನಾಡುವುದಿಲ್ಲ. ನನಗೂ ಹಳ್ಳಿ ಭಾಷೆಯಲ್ಲಿ ಬೈಯಲು ಬರುತ್ತದೆ ಆದರೆ ಹಾಗೆ ಮಾತನಾಡುವುದಿಲ್ಲ’ ಎಂದರು. 

Advertisement

Udayavani is now on Telegram. Click here to join our channel and stay updated with the latest news.

Next