Advertisement

BJP ವಿಭಿನ್ನ ಪಕ್ಷ, ಕಾಂಗ್ರೆಸ್‌ನ ತಪ್ಪನ್ನು ಮಾಡಬಾರದು: ಗಡ್ಕರಿ

12:31 AM Jul 13, 2024 | Team Udayavani |

ಪಣಜಿ: ಬಿಜೆಪಿಯು ಬೇರೆ ಪಕ್ಷಗಳಿಗಿಂತ ವಿಭಿನ್ನವಾಗಿ ರುವ ಕಾರಣದಿಂದಲೇ ಪ್ರತೀ ಸಲವೂ ಮತದಾರನ ನಂಬಿಕೆ ಗಳಿಸುತ್ತಿದೆ. ಆದರೆ ಕಾಂಗ್ರೆಸ್‌ ಮಾಡಿದ ತಪ್ಪುಗಳನ್ನು ಹೇಳುತ್ತಾ ಬಿಜೆಪಿ ತಪ್ಪು ಮಾಡುತ್ತಿದೆ ಎಂದು ಕೇಂದ್ರ ಸಚಿವ ನಿತಿನ್‌ ಗಡ್ಕರಿ ಹೇಳಿದ್ದಾರೆ.

Advertisement

ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳನ್ನು ಗೆಲ್ಲಲು ಬಿಜೆಪಿ ವಿಫ‌ಲವಾದ 1 ತಿಂಗಳ ಬಳಿಕ ಗಡ್ಕರಿ ಈ ರೀತಿ ಹೇಳಿಕೆ ನೀಡಿದ್ದು, “ಕಾಂಗ್ರೆಸ್‌ ಮಾಡಿದ ತಪ್ಪನ್ನೇ ನಾವೂ ಮಾಡಿದರೆ, ಕಾಂಗ್ರೆಸ್‌ ಅಧಿಕಾರದಿಂದ ನಿರ್ಗಮಿಸಿ ನಾವು ಅಧಿಕಾರಕ್ಕೆ ಬಂದುದರ ಪ್ರಯೋಜನವೇನು’ ಎಂದು ಪ್ರಶ್ನಿಸಿದ್ದಾರೆ. ಗೋವಾ ಬಿಜೆಪಿ ಕಾರ್ಯಕಾರಿಣಿಯಲ್ಲಿ ಈ ವಿಷಯ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next