Advertisement

ಬಿಜೆಪಿ ಪ್ರಯತ್ನಕ್ಕೆ ಕೊನೆಗೂ ಸಿಗಲಿಲ್ಲ ಫ‌ಲ

05:14 PM May 01, 2021 | Team Udayavani |

ಬಳ್ಳಾರಿ: ಈ ಬಾರಿ ಪಾಲಿಕೆ ಚುನಾವಣೆಯಲ್ಲಿ ಶತಾಯಗತಾಯ ಆಡಳಿತ ಚುಕ್ಕಾಣಿ ಹಿಡಿಯಲು ಪ್ರಯತ್ನಿಸಿದ್ದ ಬಿಜೆಪಿಗೆ ಶಾಸಕ ಸೋಮಶೇಖರರೆಡ್ಡಿ ಅವರು ಆಡಿದ ಮಾತುಗಳು ಮತ್ತು ಕೇಂದ್ರಸರ್ಕಾರದ ಅನಿಲ, ತೈಲ, ಅಗತ್ಯ ವಸ್ತುಗಳ ಬೆಲೆಗಳು ಏರಿಕೆಯಾಗಿದ್ದೇ ಮುಳುವಾಯಿತೇ…?

Advertisement

ಬಳ್ಳಾರಿ ಮಹಾನಗರ ಪಾಲಿಕೆಯ ಚುನಾವಣಾ ಫಲಿತಾಂಶ ಶುಕ್ರವಾರ ಹೊರಬಿದ್ದ ಬಳಿಕ ಸಾರ್ವಜನಿಕರಲ್ಲಿ ಕೇಳಿಬರುತ್ತಿದ್ದಮಾತುಗಳಿವು. ಕಳೆದ 2008ರಲ್ಲಿ ಪಾಲಿಕೆಯ 35ರಲ್ಲಿ 30 ವಾರ್ಡ್ ಗಳಲ್ಲಿ ಗೆದ್ದು ಪಾಲಿಕೆ ಚುಕ್ಕಾಣಿ ಹಿಡಿದಿದ್ದ ಬಿಜೆಪಿ 2013ರಲ್ಲಿ ಬಿಜೆಪಿ ಒಡೆದು ಬಿಎಸ್‌ಆರ್‌ ಆದ ಹಿನ್ನೆಲೆಯಲ್ಲಿ ಪಾಲಿಕೆಯಲ್ಲಿ ಅಧಿಕಾರಕಳೆದುಕೊಂಡಿತು. ಪರಿಣಾಮ ಅಂದು (2013ರಲ್ಲಿ) ಪಾಲಿಕೆಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ 26 ವಾರ್ಡ್‌ಗಳಲ್ಲಿ ಜಯಗಳಿಸಿ ಪಾಲಿಕೆ ಚುಕ್ಕಾಣಿ ಹಿಡಿದರೆ ಕಡಿಮೆ ವಾರ್ಡ್‌ಗಳಲ್ಲಿ ಗೆದ್ದಿದ್ದ ಬಿಜೆಪಿ/ಬಿಎಸ್‌ ಆರ್‌ ವಿರೋಧ ಪಕ್ಷದಲ್ಲಿ ಕೂತಿತ್ತು.

ಇದೀಗ 8 ವರ್ಷಗಳ ಬಳಿಕ ಪಾಲಿಕೆಗೆ ಪುನಃ ಚುನಾವಣೆ ನಡೆದಿದ್ದು, ಏ.27ರಂದು ಮತದಾನ ನಡೆದು ಏ.30 ರಂದುಶುಕ್ರವಾರ ಫಲಿತಾಂಶ ಹೊರಬಿದ್ದಿದೆ. ನಗರದ 21 ವಾರ್ಡ್‌ಗಳಲ್ಲಿಕಾಂಗ್ರೆಸ್‌ ಗೆದ್ದಿದ್ದು, 13 ವಾರ್ಡ್‌ಗಳಲ್ಲಿ ಬಿಜೆಪಿ ಜಯಗಳಿಸಿದೆ.ಚುನಾವಣೆಯಲ್ಲಿ ಬಿಜೆಪಿಯವರು ಮತದ ಮೌಲ್ಯ ವೃದ್ಧಿಸಿ ಏನೆಲ್ಲತಂತ್ರಗಾರಿಕೆ ನಡೆಸಿದರೂ ನಿರೀಕ್ಷಿತ ಫಲಿತಾಂಶ ಬಾರದಿರುವುದು ಶಾಸಕ ಸೋಮಶೇಖರರೆಡ್ಡಿ ಅವರು ಅಲ್ಪಸಂಖ್ಯಾತರ ವಿರುದ್ಧನೀಡಿರುವ ಹೇಳಿಕೆ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆಯೇ ಕಾರಣವೆನ್ನಲಾಗುತ್ತಿದೆ.

ಪುನಃ ಹರಿದಾಡಿದ ರೆಡ್ಡಿ ವಿಡಿಯೋ; ಕೇಂದ್ರ ಸರ್ಕಾರ ಜಾರಿಗೆತರಲು ಮುಂದಾಗಿದ್ದ ಸಿಎಎ, ಎನ್‌ಆರ್‌ಸಿ ಸಂಬಂಧಿ ಸಿದಂತೆ ಕಳೆದ 2020 ಜನವರಿ 3ರಂದು ನಗರದ ಗಡಗಿ ಚನ್ನಪ್ಪ ವೃತ್ತದಲ್ಲಿ ಶಾಸಕಜಿ.ಸೋಮಶೇಖರರೆಡ್ಡಿ ಅಲ್ಪಸಂಖ್ಯಾತರ ವಿರುದ್ಧ ಪ್ರಚೋದನಕಾರಿಹೇಳಿಕೆ ನೀಡಿದ್ದರು. ಇದನ್ನು ವಿರೋ ಧಿಸಿದ್ದ ಅಲ್ಪಸಂಖ್ಯಾತಸಮುದಾಯದ ಮುಖಂಡರು, ಜನರು ರೆಡ್ಡಿ ವಿರುದ್ಧ ದೂರನ್ನೂ ನೀಡಿದ್ದರು.

ರೆಡ್ಡಿಯವರು ಹಿಂದುಗಳನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಈಹೇಳಿಕೆ ನೀಡಿದ್ದರೂ ಸಹ ಅಲ್ಪಸಂಖ್ಯಾತ ಸಮುದಾಯದವರಲ್ಲಿಮಾತ್ರ ಬಿಜೆಪಿ ಮೇಲೆ ಮತ್ತಷ್ಟು ಅಸಮಾಧಾನ ಹೆಚ್ಚಿಸುವಂತೆಮಾಡಿತು. ಅಲ್ಲದೇ, ಅಂದು ರೆಡ್ಡಿ ನೀಡಿದ್ದ ಹೇಳಿಕೆಯ ವೀಡಿಯೋತುಣುಕುಗಳು ಇದೀಗ ಪಾಲಿಕೆ ಚುನಾವಣೆ ವೇಳೆಯಲ್ಲೂಸಾಮಾಜಿಕ ಜಾಲತಾಣದಲ್ಲಿ ಹರಿದಾಡಿ ಅಲ್ಪಸಂಖ್ಯಾತ ಮತಗಳನ್ನುಜಾಗೃತಿಗೊಳಿಸಿದೆ. ಜತೆಗೆ ವರ್ಷದ ಹಿಂದಿನ ರೆಡ್ಡಿ ಹೇಳಿಕೆಗೆ ಪಾಲಿಕೆಚುನಾವಣೆಯಲ್ಲೂ ಕಾಂಗ್ರೆಸ್‌ ಮುಖಂಡರು ಪ್ರಸ್ತಾಪಿಸಿದ್ದು,ಅಲ್ಪಸಂಖ್ಯಾತ ಮತಗಳು ಬಿಜೆಪಿಯಿಂದ ದೂರವಾಗಿ ಕಾಂಗ್ರೆಸ್‌ಗೆಸಾಲಿಡ್‌ಆಗಿ ಬೀಳುವಂತೆ ಮಾಡಿದೆ ಎನ್ನಲಾಗುತ್ತಿದೆ.

Advertisement

ಮನ್ನಣೆ ನೀಡದ ಮತದಾರ: ಪಾಲಿಕ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷಕ್ಕಿಂತ ಬಿಜೆಪಿ ಮುಖಂಡರು ಅತಿಹೆಚ್ಚು ಪ್ರಚಾರ ನಡೆಸಿದರು.ಜಿಲ್ಲಾ ಉಸ್ತುವಾರಿ ಸಚಿವ ಆನಂದ್‌ಸಿಂಗ್‌, ಸಮಾಜ ಕಲ್ಯಾಣಸಚಿವ ಬಿ.ಶ್ರೀರಾಮುಲು, ಶಾಸಕ ಜಿ.ಸೋಮಶೇಖರರೆಡ್ಡಿ, ಮಾಜಿ ಸಂಸದರಾದ ಸಣ್ಣ ಫಕ್ಕೀರಪ್ಪ, ಜೆ.ಶಾಂತಾ ಅವರು ಹಲವು ವಾರ್ಡ್ಗಳಲ್ಲಿ ಹೆಚ್ಚು ಪ್ರಚಾರ ನಡೆಸಿದರು. ಕೇಂದ್ರದಲ್ಲಿ ಬಿಜೆಪಿಯ ಮೋದಿ,ರಾಜ್ಯದಲ್ಲಿ ಬಿಎಸ್‌ವೈ ನೇತೃತ್ವದ ಬಿಜೆಪಿ ಸರ್ಕಾರವಿದ್ದು, ಬಳ್ಳಾರಿಪಾಲಿಕೆಯಲ್ಲೂ ಬಿಜೆಪಿ ಅಧಿಕಾರ ಇದ್ದರೆ ಬಳ್ಳಾರಿ ನಗರ ಮತ್ತಷ್ಟುಅಭಿವೃದ್ಧಿಯಾಗಲಿದೆ ಎಂಬ ಸಚಿವರು, ಶಾಸಕರ ಮಾತುಗಳಿಗೆ ಮತದಾರರು ಮನ್ನಣೆ ನೀಡಿಲ್ಲ ಎನ್ನಬಹುದು.

ಒಗ್ಗೂಡದಿದ್ದರೂ “ಕೈ’ ಗೆಲುವು: ಸದಾ ಒಡೆದ ಮನೆ, ಮನೆಯೊಂದು ಮೂರು ಬಾಗಿಲು ಎಂಬ ಆರೋಪಗಳ ನಡುವೆಯೂ ಪಾಲಿಕೆಚುನಾವಣೆಯಲ್ಲಿ ಕಾಂಗ್ರೆಸ್‌ ಜಯಭೇರಿ ಬಾರಿಸಿದೆ. ಪಾಲಿಕೆ ಚುನಾವಣೆಯಲ್ಲಿ ಟಿಕೆಟ್‌ ಹಂಚಿಕೆಯಲ್ಲೇ ಮುಖಂಡರ ನಡುವೆ ಸಾಕಷ್ಟು ಭಿನ್ನಾಭಿಪ್ರಾಯಗಳು ಮೂಡಿದ್ದವು. ಈ ಎಲ್ಲ ಅಸಮಧಾನಗಳ ನಡುವೆ ಹಾಗೂ ಕಾಂಗ್ರೆಸ್‌ ಟಿಕೆಟ್‌ ಲಭಿಸದ ಐವರುಕಾಂಗ್ರೆಸ್‌ ಬಂಡಾಯ ಪಕ್ಷೇತರ ಅಭ್ಯರ್ಥಿಗಳನ್ನು ಹೊರತುಪಡಿಸಿ 21 ಸ್ಥಾನಗಳಲ್ಲಿ ಕಾಂಗ್ರೆಸ್‌ನನ್ನು ಮತದಾರರು ಕೈ ಹಿಡಿದಿದ್ದಾರೆ.

 

-ವೆಂಕೋಬಿ ಸಂಗನಕಲ್ಲು

Advertisement

Udayavani is now on Telegram. Click here to join our channel and stay updated with the latest news.

Next