Advertisement

ಬಿಜೆಪಿಯವರಿಗೆ ಕೆಟ್ಟ ಆಸೆಗಳೇ ಜಾಸ್ತಿ,ಒಳ್ಳೆ ಆಸೆಗಳಿಲ್ಲ:ಸಿದ್ದರಾಮಯ್ಯ

09:22 AM Dec 30, 2018 | |

ಬೆಂಗಳೂರು: ಕಾಂಗ್ರೆಸ್‌ ವಿರುದ್ಧ ಬಂಡಾಯವೆದ್ದಿರುವ ಮಾಜಿ ಸಚಿವ, ಶಾಸಕ ರಮೇಶ್‌ ಜಾರಕಿಹೊಳಿ ಅವರು ವಾರದಿಂದ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ. 

Advertisement

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಜಾರಕಿಹೊಳಿ ಅವರು ಅಲ್ಲಿದ್ದಾರೆ, ಇಲ್ಲಿದ್ದಾರೆ ಅನ್ನುವುದೆಲ್ಲಾ ಅಂತೆ ಕಂತೆ, ಅವರು ದೆಹಲಿಯಲ್ಲಿ ಇದ್ದಾರೆ, ಮುಂಬಯಿಯಲ್ಲಿ ಇದ್ದಾರೆ,ಬೆಳಗಾಂ ನಲ್ಲಿ ಇದ್ದಾರೆ ಅನ್ನಲಾಗಿದೆ.  ಇದೆಲ್ಲಾ ಅಂತೆ ಕಂತೆಗಳು ಅದಕ್ಕೆಲ್ಲಾ ಉತ್ತರ ನೀಡುವುದಿಲ್ಲ ಎಂದರು. 

 ಬಿಜೆಪಿಯವರಿಗೆ ಕೆಟ್ಟ ಆಸೆಗಳೇ  ಜಾಸ್ತಿ ಒಳ್ಳೆ ಆಸೆಗಳಂತೂ ಇಲ್ಲವೇ ಇಲ್ಲ.ಕುದುರೆ ವ್ಯಾಪಾರ ಮಾಡಿ ವಾಮ ಮಾರ್ಗದ ಮೂಲಕ ಅಧಿಕಾರ ಹಿಡಿಯಲು ಮುಂದಾಗಿದ್ದಾರೆ. ಜನ ಅವರಿಗೆ 104 ಸ್ಥಾನಗಳನ್ನು ಮಾತ್ರ ನೀಡಿದ್ದು ಎಂದು ಲೇವಡಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next