ಕಾರ್ಯಕರ್ತರನ್ನು ಸ್ವಾಗತಿಸಿದ ಕೆ. ರಘುಪತಿ ಭಟ್ ಮಾತನಾಡಿ, ಕಾಂಗ್ರೆಸ್ ಪಕ್ಷದಿಂದ ಹತಾಶರಾದ ಕಾರ್ಯಕರ್ತರು ಪ್ರತಿನಿತ್ಯ ಬಿಜೆಪಿಗೆ ಸೇರ್ಪಡೆಗೊಳ್ಳುತ್ತಿದ್ದಾರೆ ಎಂದರೆ ಇದರರ್ಥ ಬಿಜೆಪಿ ಪಕ್ಷದ ಮೇಲೆ ಜನತೆಗೆ ಅತಿ ಹೆಚ್ಚು ವಿಶ್ವಾಸ ಮೂಡಿದೆ ಎನ್ನಬಹುದು. ಪ್ರಮೋದ್ ಮಧ್ವರಾಜ್ ತಮ್ಮ ಕಾರ್ಯಕರ್ತರನ್ನು ನಿರ್ಲಕ್ಷ್ಯ ಮಾಡಿರುವುದೇ ಇದಕ್ಕೆ ಪ್ರಮುಖ ಕಾರಣ. ಕಾರ್ಯಕರ್ತರನ್ನು ಅಗೌರವದಿಂದ ಕಂಡರೆ ಯಾವುದೇ ಜನಪ್ರತಿನಿಧಿಯಾಗಲಿ ಅವರೊಂದಿಗೆ ಇರುವುದಿಲ್ಲ ಎಂಬುದಕ್ಕೆ ಇದೊಂದು ಉತ್ತಮ ಉದಾಹರಣೆ. ಇದು ಎಲ್ಲ ಜನಪ್ರತಿಗಳಿಗೂ ಒಂದು ಪಾಠ ಎಂದರು.
Advertisement
ಮಾಜಿ ಸಂಸದ ಕೆ. ಜಯಪ್ರಕಾಶ್ ಹೆಗ್ಡೆ ಮಾತನಾಡಿ, ಬಿಜೆಪಿ ಪಕ್ಷದತ್ತ ಕಾರ್ಯಕರ್ತರು ಆಕರ್ಷಿತರಾಗಲು ಪಕ್ಷದ ನಿಲುವು, ಧ್ಯೇಯೋದ್ಧೇಶಗಳೇ ಕಾರಣ. ಮುಂದಿನ ದಿನಗಳಲ್ಲಿ ಅತಿ ಹೆಚ್ಚು ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆಗೊಳ್ಳುವ ಮೂಲಕ ಕ್ಷೇತ್ರದ ಚಿತ್ರಣವನ್ನು ಬದಲಾಯಿಸುವ ಕಾರ್ಯದಲ್ಲಿ ನಾವೆಲ್ಲರೂ ಕೈಜೋಡಿಸೋಣ ಎಂದರು.