Advertisement

ಬಿಎಸ್‌ವೈ ನೇತೃತ್ವದಲ್ಲಿ ಬಿಜೆಪಿ ಸರಕಾರ ಅನಂತ ಕುಮಾರ್‌

02:50 PM Jun 03, 2017 | Harsha Rao |

ಹೆಬ್ರಿ: ಕರ್ನಾಟಕದಲ್ಲಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಬರಲಿ. ಈಗಾಗಲೇ ಅಭಿವೃದ್ಧಿಯಲ್ಲಿ ಮೂಂಚೂಣಿಯಲ್ಲಿರುವ ಕಾರ್ಕಳದಂತೆ ರಾಜ್ಯದೆಲ್ಲೆಡೆ ಅಭಿವೃದ್ಧಿ ಕಾಣಲು ಬಿಜೆಪಿ ಪಕ್ಷಕ್ಕೆ ಅವಕಾಶ ನೀಡಿ ಎಂದು ಕೇಂದ್ರ ಸಚಿವ ಅನಂತ ಕುಮಾರ್‌ ಹೇಳಿದರು. ಅವರು ಜೂ. 2ರಂದು ಹೊರನಾಡಿನಿಂದ ಹೆಬ್ರಿ ಮೂಲಕ ಕೊಲ್ಲೂರಿಗೆ ತೆರಳುತ್ತಿರುವ ಸಂದರ್ಭ ಹೆಬ್ರಿಗೆ ಭೇಟಿ ನೀಡಿ ಹೆಬ್ರಿ ಬಸ್ಸು ತಂಗುದಾಣ ವಠಾರದಲ್ಲಿ ನಡೆದ ಹೆಬ್ರಿ ಕಾರ್ಕಳ ಬಿಜೆಪಿ ಪ್ರಮುಖರ ಗೌರವ ಸ್ವೀಕರಿಸಿ ಮಾತನಾಡಿದರು. ಈ ಸಂದರ್ಭ ಹೆಬ್ರಿ ಭಾಗದ ಜನರಿಗೆ ಅನುಕೂಲವಾಗುವಂತೆ ಕೇಂದ್ರ ಸರಕಾರದ ಜನಪರ ಯೋಜನೆಯಾದ ಜನೌಷಧ ಮಳಿಗೆ ಹೆಬ್ರಿಯಲ್ಲಿ ತೆರೆಯುವಂತೆ ಮತ್ತು ಗ್ರಾಮೀಣ ಭಾಗದ ಕೈಗಾರಿಕೆಗಳಿಗೆ ಪ್ರೋತ್ಸಾಹ ಸೇರಿದಂತೆ ಹಲವು ಬೇಡಿಕೆಗಳನ್ನು ಕೇಂದ್ರ ಸಚಿವರಿಗೆ ಸಲ್ಲಿಸಿದ್ದು, ಈ ಬಗ್ಗೆ ಚರ್ಚಿಸಿ ಕ್ರಮ ಕೈಗೊಳ್ಳುವ ಭರವಸೆ ಸಚಿವರು ನೀಡಿದರು.

Advertisement

ಈ ಸಂದರ್ಭ ಕಾರ್ಕಳ ಶಾಸಕ ವಿ. ಸುನೀಲ್‌ ಕುಮಾರ್‌, ಉದ್ಯಮಿ ಸತೀಶ್‌ ಪೈ, ಜಿ.ಪಂ. ಸದಸ್ಯೆ ಜ್ಯೋತಿ ಹರೀಶ್‌, ತಾ.ಪಂ. ಸದಸ್ಯರಾದ ಅಮೃತ್‌ ಕುಮಾರ್‌ ಶೆಟ್ಟಿ, ರಮೇಶ್‌ ಪೂಜಾರಿ, ಚಂದ್ರಶೇಖರ ಶೆಟ್ಟಿ, ಹೆಬ್ರಿ ಗ್ರಾ.ಪಂ. ಅಧ್ಯಕ್ಷ ಸುಧಾಕರ್‌ ಹೆಗ್ಡೆ, ಉಪಾಧ್ಯಕ್ಷೆ ವೀಣಾ ಪ್ರಭು, ಸಮೃದ್ಧಿ ಪ್ರಕಾಶ್‌ ಶೆಟ್ಟಿ, ಚಾರ ರತ್ನಾಕರ ಶೆಟ್ಟಿ, ಸುಗಂಧಿ ನಾಯ್ಕ, ಗಣೇಶ್‌ ಜರ್ವತ್ತು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next