Advertisement

ಬಿಜೆಪಿಗೆ ಡಿಕೆಶಿ ರಾಜೀನಾಮೆ ಕೇಳುವ ನೈತಿಕತೆ ಇದೆಯಾ?:ಗುಡುಗಿದ ಸಿಎಂ 

12:17 PM Aug 04, 2017 | Team Udayavani |

ಬೆಂಗಳೂರು: ಐಟಿ ದಾಳಿ ನಡೆದಿರುವ ಹಿನ್ನಲೆಯಲ್ಲಿ ಸಚಿವ ಡಿ.ಕೆ.ಶಿವಕುಮಾರ್‌ ಅವರು ರಾಜೀನಾಮೆ ನೀಡಬೇಕು ಎಂದಿರುವ ಬಿಜೆಪಿ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಕಿಡಿ ಕಾರಿದ್ದಾರೆ. 

Advertisement

ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಿಎಂ ಸಿದ್ದರಾಮಯ್ಯ’ ದಾಳಿಯಲ್ಲಿ ಏನು ಸಿಕ್ಕಿದೆ, ಏನು ಸಿಕ್ಕಿಲ್ಲ ಎಂದು ನಮಗೆ ಗೊತ್ತಿಲ್ಲ. ದಾಳಿ ರಾಜಕೀಯ ಪ್ರೇರಿತವಾಗಿದ್ದು, ದಾಳಿಗೆ ಸಿಆರ್‌ಪಿಎಫ್ ಬಳಸಿದ್ದೇಕೆ’ಎಂದು ಪ್ರಶ್ನಿಸಿದರು.  

‘ಈ ಸಮಯದಲ್ಲಿ ಐಟಿ ದಾಳಿ ನಡೆಸಿರುವುದು ಸರಿಯಲ್ಲ,ರೆಸಾರ್ಟ್‌ಗೆ ಹೋಗಿ ದಾಳಿ ನಡೆಸಿರುವುದು ತಪ್ಪು ‘ಎಂದು ಕಿಡಿಕಾರಿದರು. ಇದೇ ವೇಳೆ ‘ದಾಳಿಯ ಕುರಿತು ಸಚಿವರ ಸಭೆ ಕರೆದು ಮಾತನಾಡುತ್ತೇನೆ’ ಎಂದು ಸಿಎಂ ತಿಳಿಸಿದರು. 

‘ಬಿ.ಎಸ್‌.ಯಡಿಯೂರಪ್ಪ ಮೇಲೂ ಆರೋಪವಿದೆ, ಆದರೆ ಬಿಜೆಪಿಯವರು ಶಿವಕುಮಾರ್‌ ಅವರ ರಾಜೀನಾಮೆ ಕೇಳುತ್ತಿದ್ದಾರೆ. ಅವರಿಗೆ ನೈತಿಕತೆ ಇದೆಯಾ’ ಎಂದು ಪ್ರಶ್ನಿಸಿದರು. 

ತಾಯಿಯ ಆರೋಪಕ್ಕೆ ಉತ್ತರಿಸಿಲು ಟೈಂ ಇಲ್ಲ!

Advertisement

ಡಿ.ಕೆ.ಶಿವಕುಮಾರ್‌ ಅವರ ತಾಯಿಯ ಆರೋಪದ ಕುರಿತು ಪ್ರಶ್ನಿಸಿದಾಗ ‘ನನಗೆ ಟೈಂ ಇಲ್ಲ ‘ಎಂದು ಯಾವುದೇ ಉತ್ತರ ನೀಡದೆ ಮುಂದೆ ಸಾಗಿದರು. 

ನನ್ನ ಮಗನ ರಾಜಕೀಯ ಏಳಿಗೆ ಸಹಿಸದೇ ಐಟಿ ದಾಳಿ ನಡೆಸಿದವರು ಹುಚ್ಚರು,ಇದರ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಬಿಜೆಪಿ ನಾಯಕರ ಕೈವಾಡವಿದೆ,” ಎಂದು ಸಚಿವ ಡಿ.ಕೆ. ಶಿವಕುಮಾರ್‌ ತಾಯಿ ಗೌರಮ್ಮ ಆರೋಪಿಸಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next