Advertisement

BJP vs TMC ; ಖಾಸಗಿತನಕ್ಕೆ ಧಕ್ಕೆ: ಸಂದೇಶ್‌ಖಾಲಿ ಸಂತ್ರಸ್ತೆ ರೇಖಾ ಸುಪ್ರೀಂಗೆ ಮೊರೆ

12:38 AM Mar 30, 2024 | Team Udayavani |

ಹೊಸದಿಲ್ಲಿ: ಸಂದೇಶ್‌ ಖಾಲಿ ಪ್ರಕರಣದ ಸಂತ್ರಸ್ತೆ ಹಾಗೂ ಪಶ್ಚಿಮ ಬಂಗಾಳದ ಬಸೀರ್‌ಹಾತ್‌ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರೇಖಾ ಪಾತ್ರ ಅವರು ಟಿಎಂಸಿ ಹಾಗೂ ಆ ಪಕ್ಷದ ಅಭ್ಯರ್ಥಿ ದೇಬಾಂಗ್ಶು ಭಟ್ಟಾಚಾರ್ಯ ಅವರ ವಿರುದ್ಧ ಸುಪ್ರೀಂಕೋರ್ಟ್‌ ಮೊರೆ ಹೋಗಿದ್ದಾರೆ. ತಮ್ಮ ಖಾಸಗಿತನಕ್ಕೆ ಟಿಎಂಸಿ ಅಭ್ಯರ್ಥಿ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿ ರಾಷ್ಟ್ರೀಯ ಮಹಿಳಾ ಆಯೋಗಕ್ಕೂ ದೂರು ನೀಡಿದ್ದಾರೆ.

Advertisement

ಇತ್ತೀಚೆಗಷ್ಟೇ ಪ್ರಧಾನಿ ಮೋದಿ ಅವರು ರೇಖಾ ಅವರಿಗೆ ದೂರವಾಣಿ ಕರೆ ಮಾಡಿ ಮಾತನಾಡಿದ್ದಲ್ಲದೇ, ಆಕೆಯನ್ನು ಶಕ್ತಿ ಸ್ವರೂಪ ಎಂದು ಬಣ್ಣಿಸಿದ್ದರು. ಬೆನ್ನಲ್ಲೇ ರೇಖಾ ಕುರಿತಂತೆ ಟಿಎಂಸಿ ಪಕ್ಷದ ಟ್ವೀಟರ್‌ ಖಾತೆಯಲ್ಲಿ ಪೋಸ್ಟ್‌ ಒಂದನ್ನು ಮಾಡಲಾಗಿತ್ತು. ಅದರಲ್ಲಿ ರೇಖಾ ರಾಜ್ಯ ಸರ್ಕಾರದ ಯೋಜನೆಗಳ ಫ‌ಲಾನುಭವಿ ಯಾಗಿದ್ದು, ಕೈ ಜೋಡಿಸಿರುವುದು ಮಾತ್ರ ದೆಹಲಿ ದೊರೆಗಳ ಜತೆಗೆ ಎಂದು ಜರಿಯಲಾಗಿತ್ತು. ಈ ಟ್ವೀಟ್‌ನ ಬೆನ್ನಲ್ಲೇ ತಮ್ಲುಕ್‌ ಕ್ಷೇತ್ರದ ಅಭ್ಯರ್ಥಿಯಾಗಿರುವ ದೇಬಾಂಗ್ಶು ಅವರು ರೇಖಾ ಅವರ ವೈಯಕ್ತಿಕ ಮಾಹಿತಿಗಳನ್ನು ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದನ್ನು ಆಕ್ಷೇಪಿಸಿ ರೇಖಾ ದೂರು ದಾಖಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next