Advertisement

BJP; ಅನಂತ್ ಕುಮಾರ್ ಹೆಗಡೆ ಏಕವಚನ ಬಳಸಿದ್ದು ತಪ್ಪು: ರೇಣುಕಾಚಾರ್ಯ

08:58 PM Jan 15, 2024 | Team Udayavani |

ದಾವಣಗೆರೆ: ಸಂಸದ ಅನಂತ್ ಕುಮಾರ್ ಹೆಗಡೆ ಏಕವಚನ ಬಳಸಿದ್ದು ನಾನು ಒಪ್ಪುವುದಿಲ್ಲ ಹಿಂದೆ ಸಿದ್ದರಾಮಯ್ಯ ಸರ್ಜಿಕಲ್ ಸ್ಟ್ರೈಕ್ ವಿಚಾರ ಮಾತನಾಡುವಾಗ ಏಕವಚನ ಪದ ಬಳಕೆ ಮಾಡಿದ್ದರು, ಯಾರೇ ಆಗಲಿ ಏಕವಚನದಲ್ಲಿ ಮಾತನಾಡಬಾರದು ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಸೋಮವಾರ ಹೇಳಿಕೆ ನೀಡಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿ ”ಬಿಜೆಪಿಗೆ ಒಂದು ಸಿದ್ಧಾಂತ ಇದೆ.ಅನಂತ್ ಕುಮಾರ್ ಹೆಗಡೆ ಆಗಲಿ, ಯಾರೇ ಆಗಲಿ ಆರೋಗ್ಯಕರವಾಗಿ ಟೀಕೆ, ಟಿಪ್ಪಣಿ ಮಾಡಬೇಕು” ಎಂದರು.

ಸಂ‌ಸದ ಜಿ ಎಂ ಸಿದ್ದೇಶ್ವರ್ ಅವರಿಗೆ ಜೀವ ಬೆದರಿಕೆ ಇದ್ದರೆ ಅವರು ದೂರು ದಾಖಲು ನೀಡಲಿ. ಆ ರೀತಿ ಆಗಿದ್ದರೆ ಅದನ್ನು ನಾನು ಖಂಡಿಸುತ್ತೇನೆ ಎಂದು ಹೇಳಿದರು.

ಹಾನಗಲ್ ನಲ್ಲಿ ನಡೆದ ಗ್ಯಾಂಗ್ ರೇಪ್ ಪ್ರಕರಣದ ಆರೋಪಿಗಳನ್ನು ಎನ್ಕೌಂಟರ್ ಮಾಡಬೇಕು, ಗಲ್ಲಿಗೇರಿಸಬೇಕು ಎಂದು ಒತ್ತಾಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next