Advertisement
ಪ್ರತಿಭಟನೆ ನಡೆಸಿಯೇ ಸಿದ್ಧಶಿವಮೊಗ್ಗ ಜಿಲ್ಲೆಯಿಂದ ಸುಮಾರು 1,500ಕ್ಕೂ ಹೆಚ್ಚಿನ ಬೈಕ್ಗಳಲ್ಲಿ ಬಿ.ಜೆ.ಪಿ. ಕಾರ್ಯಕರ್ತರು ಹೆಬ್ರಿಗೆ ಬರುವುದನ್ನು ಸರಕಾರ ಪೊಲೀಸರ ಮುಖಾಂತರ ತಡೆದಿದೆ. ಎಷ್ಟೇ ತಡೆದರೂ 25,000ಕ್ಕೂ ಮಿಕ್ಕಿದ ಕಾರ್ಯಕರ್ತರು ಸೇರಿ ಮಂಗಳೂರಿನಲ್ಲಿ ಪ್ರತಿಭಟನೆ ಯನ್ನು ಮಾಡಿಯೇ ಸಿದ್ಧ ಎಂದರು.
ಹೆಬ್ರಿ ಬಸ್ ತಂಗುದಾಣದಲ್ಲಿ ನಡೆದ ಪ್ರತಿಭಟನೆಯ ಬಳಿಕ ಕಾರ್ಕಳ ಮಾರ್ಗವಾಗಿ ಮಂಗಳೂರಿಗೆ ಹೊರಟ ಬೈಕ್ ರ್ಯಾಲಿಯನ್ನು ಡಿವೈಎಸ್ಪಿ ಕುಮಾರಸ್ವಾಮಿ ನೇತೃತ್ವದ ಪೊಲೀಸ್ ತಂಡ ತಡೆಯಿತು. ಸುಮಾರು 150 ಮಂದಿಯನ್ನು ಬಂಧಿಸಿ ಬಿಡುಗಡೆ ಮಾಡಲಾಯಿತು. ಜಿಲ್ಲಾ ಬಿಜೆಪಿ ಯುವಮೋರ್ಚಾ ಉಪಾಧ್ಯಕ್ಷ ಸಮೃದ್ಧಿ ಪ್ರಕಾಶ್ ಶೆಟ್ಟಿ, ಮುಟ್ಲಪಾಡಿ ಸತೀಶ್ ಶೆಟ್ಟಿ, ಜ್ಯೋತಿ ಹರೀಶ್, ಪ್ರಮೀಳಾ ಹರೀಶ್, ಸುಕೇಶ್ ಹೆಗ್ಡೆ, ಸಮಿತ್ ಶೆಟ್ಟಿ,ಸುಧಾಕರ ಹೆಗ್ಡೆ ಮೊದಲಾದವರಿದ್ದರು.