Advertisement

ಮೂಡುಶೆಡ್ಡೆ-ಶಾಲೆಪದವು ರಸ್ತೆ, ಮರಳು ಸಾಗಾಟದಿಂದ ಕಿತ್ತು ಹೋದ ಡಾಮರು!

11:10 AM Feb 10, 2018 | Team Udayavani |

ಮಹಾನಗರ: ಮೂಡುಶೆಡ್ಡೆ ಗ್ರಾ.ಪಂ. ವ್ಯಾಪ್ತಿಯ ಮೂಡುಶೆಡ್ಡೆ- ಶಾಲೆ ಪದವು ರಸ್ತೆಯಲ್ಲಿ ಒಂದು ತಿಂಗಳಿ
ನಿಂದ ಮರಳು ಸಾಗಾಟದ ಲಾರಿಗಳು ಸಂಚರಿಸುತ್ತಿರುವ ಪರಿಣಾಮ ರಸ್ತೆ ಪೂರ್ತಿ ಹದಗೆಟ್ಟಿದೆ. ಜತೆಗೆ ರಸ್ತೆ ಪೂರ್ತಿ ಧೂಳಿನಿಂದ ತುಂಬಿದ್ದು, ಸ್ಥಳೀಯ ನಿವಾಸಿಗಳು ತೊಂದರೆ ಅನುಭವಿ ಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

Advertisement

ವಾಮಂಜೂರಿನಿಂದ ಮೂಡುಶೆಡ್ಡೆಗೆ ತೆರಳುವ ರಸ್ತೆಯ ಕೊನೆಯಲ್ಲಿ ಒಂದು ರಸ್ತೆಯು ಶಾಲೆಪದವಿಗೆ ಸಾಗುತ್ತದೆ. ಇದು ಡಾಮರು ರಸ್ತೆಯಾಗಿದ್ದು, ಸಂಚಾರಕ್ಕೆ ಯೋಗ್ಯವಾಗಿತ್ತು. ಆದರೆ ಇಲ್ಲಿ ಗುರುಪುರ ಡ್ಯಾಮ್‌ ಬಳಿಯಲ್ಲಿ ಮರಳುಗಾರಿಕೆ ನಡೆಯುತ್ತಿದ್ದು, ಇಲ್ಲಿ ಸಂಗ್ರಹಿಸಿದ ಮರಳನ್ನು ಲಾರಿಗಳ ಮೂಲಕ ಇದೇ ರಸ್ತೆಯಲ್ಲಿ ಸಾಗಿಸಲಾಗುತ್ತಿದೆ.

ಈ ಹಿನ್ನೆಲೆಯಲ್ಲಿ ಈಗ ರಸ್ತೆ ಪೂರ್ತಿ ಹದಗೆಟ್ಟಿದೆ. ಒಂದೂವರೆ ಕಿ.ಮೀ.ವ್ಯಾಪ್ತಿಯ ರಸ್ತೆಯಲ್ಲಿ ಪೂರ್ತಿ ಧೂಳು ತುಂಬಿದ್ದು,
ಸ್ಥಳೀಯ ಮನೆಗಳು ಧೂಳಿನಿಂದ ಮುಳುಗಿ ಹೋಗಿವೆ. ಈ ಭಾಗದಲ್ಲಿ ಸುಮಾರು 20 ಮನೆಗಳಿವೆ. ನಿತ್ಯ ಸರಾಸರಿ 10 ಲಾರಿಗಳು ಸಾಗಾಟ ನಡೆಸುತ್ತಿವೆ ಎಂಬ ಆರೋಪ ಸಾರ್ವಜನಿಕರಿಂದ ಕೇಳಿಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next