Advertisement

Kerala; ರಾಜಕೀಯ ಹುತಾತ್ಮರು..:ವಿವಾದಕ್ಕೆ ಗುರಿಯಾದ ಆರ್ಚ್‌ಬಿಷಪ್ ಹೇಳಿಕೆ

08:34 PM May 21, 2023 | Team Udayavani |

ಕಣ್ಣೂರು: ‘ರಾಜಕೀಯ ಹುತಾತ್ಮರು ಎಂದರೆ ಅನಗತ್ಯ ಜಗಳದಲ್ಲಿ ಸಿಲುಕಿ ಸತ್ತವರು’ ಎಂದು ಹೇಳುವ ಮೂಲಕ ಕೇರಳದ ಕ್ಯಾಥೋಲಿಕ್ ಆರ್ಚ್‌ಬಿಷಪ್ ಒಬ್ಬರು ವಿವಾದಕ್ಕೆ ಸಿಲುಕಿದ್ದಾರೆ. ಅವರ ಹೇಳಿಕೆ ವಿರುದ್ಧ ರಾಜಕೀಯ ನಾಯಕರು ತೀವ್ರವಾಗಿ ಖಂಡಿಸಿದ್ದಾರೆ.

Advertisement

ಶನಿವಾರ ನಡೆದ ಕೇರಳ ಕ್ಯಾಥೋಲಿಕ್ ಯೂತ್ ಮೂವ್‌ಮೆಂಟ್ (ಕೆಸಿವೈಎಂ) ಕಾರ್ಯಕ್ರಮದಲ್ಲಿ ತಲಸ್ಸೆರಿ ಆರ್ಚ್‌ಬಿಷಪ್ ಮಾರ್ ಜೋಸೆಫ್ ಪಂಪ್ಲಾನಿ ಅವರು ಯೇಸುವಿನ 12 ಅಪೊಸ್ತಲರ ಹುತಾತ್ಮತೆಯು ರಾಜಕೀಯ ಹುತಾತ್ಮರಿಗಿಂತ ಭಿನ್ನವಾಗಿದೆ ಎಂದು ಹೇಳಿದರು.

“ಅಪೊಸ್ತಲರ ಹುತಾತ್ಮತೆಯು ರಾಜಕೀಯ ಹುತಾತ್ಮರಂತೆಯೇ ಅಲ್ಲ. ರಾಜಕೀಯ ಹುತಾತ್ಮರಲ್ಲಿ ಕೆಲವರು ಯಾರೊಂದಿಗಾದರೂ ಅನಗತ್ಯ ಜಗಳವಾಡಿ ಗುಂಡು ಹಾರಿಸಿದವರು ಅಥವಾ ಕೆಲವರು ಕೆಲವು ಪ್ರತಿಭಟನೆಗಳ ನಂತರ ಪೊಲೀಸರಿಂದ ತಪ್ಪಿಸಿಕೊಳ್ಳುವಾಗ ಸೇತುವೆಯಿಂದ ಬಿದ್ದವರು. ಆದರೆ 12 ಹುತಾತ್ಮರಾದ ಅಪೊಸ್ತಲರು ಯೇಸುವಿನ ಸತ್ಯಕ್ಕಾಗಿ ಮತ್ತು ಪ್ರಪಂಚದ ಯೋಗಕ್ಷೇಮಕ್ಕಾಗಿ ತಮ್ಮ ಜೀವನವನ್ನು ತ್ಯಾಗ ಮಾಡಿದವರು, ” ಎಂದು ಹೇಳಿದ್ದರು.

ಏತನ್ಮಧ್ಯೆ, ಬಿಜೆಪಿಯು ಬಿಷಪ್ ಬೆಂಬಲಕ್ಕೆ ನಿಂತಿದ್ದು ಹಿರಿಯ ಧರ್ಮಗುರುಗಳ ಮೇಲಿನ ದಾಳಿ ಪ್ರಜಾಪ್ರಭುತ್ವ ವಿರೋಧಿ ಎಂದು ಹೇಳಿದೆ. “ಇತರರೊಂದಿಗೆ ಅನಗತ್ಯ ಜಗಳವಾಡುವವರನ್ನು ಹುತಾತ್ಮರನ್ನಾಗಿಸುವುದು ಸಿಪಿಐ(ಎಂ)… ಬಿಷಪ್ ಅವರು ಸಿಪಿಐ(ಎಂ) ಮುಖವನ್ನು ಬಹಿರಂಗಪಡಿಸಿದ್ದಾರೆ. ಎಡಪಕ್ಷಗಳು ಪ್ರಬಲವಾಗಿರುವ ಸ್ಥಳಗಳಲ್ಲಿ ಮಾತ್ರ ರಾಜಕೀಯ ಹಿಂಸಾಚಾರ ನಡೆಯುತ್ತದೆ. ಹುತಾತ್ಮರ ಸಾವನ್ನು ಆಚರಿಸುವವರು ಅವರೇ” ಎಂದು ಬಿಜೆಪಿ ರಾಜ್ಯಾಧ್ಯಕ್ಷ ಕೆ ಸುರೇಂದ್ರನ್ ಪ್ರತಿಪಾದಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next