Advertisement

ಪಾತಕಿ ಛೋಟಾ ರಾಜನ್ ಬರ್ತ್ ಡೇಗೆ ಶುಭಕೋರಿ ಬ್ಯಾನರ್: 6 ಜನರ ವಿರುದ್ಧ ಪ್ರಕರಣ

02:49 PM Jan 14, 2023 | Team Udayavani |

ಮುಂಬೈ: ಮುಂಬೈನ ಮಲಾಡ್‌ ನಲ್ಲಿ ಭೂಗತ ಪಾತಕಿ ಛೋಟಾ ರಾಜನ್ ಜನ್ಮದಿನದಂದು ಪೋಸ್ಟರ್ ಹಾಕಿದ್ದಕ್ಕಾಗಿ ಆರು ಜನರ ವಿರುದ್ಧ ಮುಂಬೈ ಪೊಲೀಸರು ಶನಿವಾರ (ಜನವರಿ 14) ಪ್ರಕರಣ ದಾಖಲಿಸಿದ್ದಾರೆ. ಈ ಸಂದರ್ಭದಲ್ಲಿ ಕಬಡ್ಡಿ ಕಾರ್ಯಕ್ರಮ ಆಯೋಜಿಸಿದ್ದ ವ್ಯಕ್ತಿಯ ವಿರುದ್ಧವೂ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Advertisement

ಪೋಸ್ಟರ್‌ ನಲ್ಲಿ ನಮೂದಿಸಲಾದ ವಿವರಗಳಲ್ಲಿ ಸಾಗರ್ ರಾಜ್ ಗೋಲೆ ಎಂಬ ವ್ಯಕ್ತಿಯೇ ಸಂಘಟಕ ಎಂದು ಬರೆಯಲಾಗಿದ್ದು, ‘ಸಿಆರ್ ಸಮಾಜಿಕ ಸಂಘಟನೆ’ ಮಹಾರಾಷ್ಟ್ರದ ಪೋಸ್ಟರ್ ಹಾಕಲಾಗಿದೆ.

ಇದನ್ನೂ ಓದಿ:ತಮಿಳುನಾಡು ಡಿಎಂಕೆ ನಾಯಕನ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ದೂರು

ಪೋಸ್ಟರ್ ಪ್ರಕಾರ ಶುಕ್ರವಾರ (ಜನವರಿ 13) ಭೂಗತ ಪಾತಕಿ ಛೋಟಾ ರಾಜನ್ ಜನ್ಮದಿನದ ಸಂದರ್ಭದಲ್ಲಿ ಕಬ್ಬಡ್ಡಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಮೂಲತಃ ಚೆಂಬೂರಿನ ಪಾತಕಿ ಛೋಟಾ ರಾಜನ್ ನ ನಿಜವಾದ ಹೆಸರು ರಾಜೇಂದ್ರ ಸದಾಶಿವ ನಿಕಲ್ಜೆ. ಸುಮಾರು ನಾಲ್ಕು ವರ್ಷಗಳ ಹಿಂದೆ ಆತನನ್ನು ಮಲೇಷ್ಯಾದಿಂದ ಗಡೀಪಾರು ಮಾಡಲಾಗಿತ್ತು. ಇತ್ತೀಚೆಗಷ್ಟೇ ಪತ್ರಕರ್ತ ಜೆ ಡೇ ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದರು.

Advertisement

Advertisement

Udayavani is now on Telegram. Click here to join our channel and stay updated with the latest news.

Next