Advertisement

ಇಂದು ಜನಿಸಿದವರಿಗೆ “ಕುಮಾರಣ್ಣ ಬಾಂಡ್‌’

07:53 AM Dec 16, 2017 | |

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹುಟ್ಟುಹಬ್ಬದ ಪ್ರಯುಕ್ತ ಅವರ ಅಭಿಮಾನಿಗಳ ಬಳಗವು “ಕುಮಾರಣ್ಣ ಬಾಂಡ್‌’ ಎಂಬ ವಿಶೇಷ ವಿಮಾ ಯೋಜನೆ ರೂಪಿಸಿದೆ. ರಾಮನಗರ ಜಿಲ್ಲೆಯಲ್ಲಿ ಶನಿವಾರ (ಡಿ.16)ದಂದು ಬಿಪಿಎಲ್‌ ಕಾರ್ಡ್ದಾರರ ಕುಟುಂಬಗಳಲ್ಲಿ ಜನಿಸುವ ಮಕ್ಕಳಿಗೆ ತಲಾ ಐದು ಸಾವಿರ ರೂ. ಮುಖಬೆಲೆಯ ಬಾಂಡ್‌ ದೊರೆಯಲಿದ್ದು, ಅದು ಆರು ವರ್ಷಕ್ಕೆ 10 ಸಾವಿರ ರೂ., 12 ವರ್ಷಗಳಿಗೆ 20 ಸಾವಿರ ರೂ., 18 ವರ್ಷಕ್ಕೆ 40 ಸಾವಿರ ರೂ. ಹಾಗೂ 24 ವರ್ಷಕ್ಕೆ 80 ಸಾವಿರ
ರೂ. ದೊರೆಯಲಿದೆ. 

Advertisement

ರಾಮನಗರ, ಕನಕಪುರ, ಮಾಗಡಿ, ಚನ್ನಪಟ್ಟಣದ ಕ್ಷೇತ್ರದಲ್ಲಿರುವವರು ಈ ಬಾಂಡ್‌ ಪಡೆಯಲು ಅರ್ಹರಿದ್ದು, ಶನಿವಾರ(ಡಿ.16) ಜನಿಸಿದ ಮಕ್ಕಳಿಗಷ್ಟೇ ಇದು ಅನ್ವಯವಾಗಲಿದೆ. ಇದಕ್ಕಾಗಿ ಪೋಷಕರು ಮಗುವಿನ ಜನ್ಮ ದೃಢೀಕರಣ ಪತ್ರದೊಂದಿಗೆ ಅರ್ಜಿ 
ಸಲ್ಲಿಸಬಹುದು. ರಾಜ್ಯ ಯುವ ಜನತಾದಳ ಉಪಾಧ್ಯಕ್ಷ ಸೈಯಲ್‌ ಶಾಹಿದ್‌, ಬೆಂಗಳೂರು ನಗರ ಯುವ ಜನತಾದಳದ ಉಪಾಧ್ಯಕ್ಷ ರಾಜೇಂದ್ರಸಿಂಗ್‌ ಇದರ ಉಸ್ತುವಾರಿ ವಹಿಸಿದ್ದಾರೆ. ಮಾಹಿತಿಗೆ 9945767862 ಅಥವಾ 7975911528 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ಅಪ್ಪಾಜಿ ಕ್ಯಾಂಟೀನ್‌: ಎಚ್‌.ಡಿ. ಕುಮಾರಸ್ವಾಮಿಯವರ ಹುಟ್ಟುಹಬ್ಬ ಪ್ರಯುಕ್ತ ಜೆಡಿಎಸ್‌ ಕಚೇರಿ ಜೆಪಿ ಭವನದಲ್ಲಿ ವಿಧಾನಪರಿಷತ್‌ ಸದಸ್ಯ ಟಿ.ಎ.ಶರವಣ ಅಪ್ಪಾಜಿ ಕ್ಯಾಂಟೀನ್‌ ಪ್ರಾರಂಭಿಸಲಿದ್ದು, ಕುಮಾರಸ್ವಾಮಿ ಯವರೇ ಇದನ್ನು ಉದ್ಘಾಟಿಸಲಿದ್ದಾರೆ. 

ವಿಶೇಷ ಪೂಜೆ: ಹುಟ್ಟುಹಬ್ಬದ ಪ್ರಯುಕ್ತ ಕುಮಾರಸ್ವಾಮಿಯವರು ಶನಿವಾರ ಬೆಳಗ್ಗೆ 6 ಗಂಟೆಗೆ ರಾಜರಾಜೇಶ್ವರಿನಗರದಲ್ಲಿ ವಿಶೇಷ ಪೂಜೆಯಲ್ಲಿ ಪಾಲ್ಗೊಳ್ಳಲಿದ್ದು ನಂತರ ಪದ್ಮನಾಭನಗರದಲ್ಲಿ ದೇವೇಗೌಡರ ಆಶೀರ್ವಾದ ಪಡೆದು ವಿಕಲಚೇತನ ಮಕ್ಕಳ ಜತೆ ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದಾರೆ. ವಿಜಯನಗರದಲ್ಲಿರುವ ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದು ಸಂಜೆ ರಾಮನಗರದ ಚಾಮುಂಡೇಶ್ವರಿ ದೇವಾಲಯದಲ್ಲಿ ಪೂಜೆಯಲ್ಲಿ ಪಾಲ್ಗೊಳ್ಳಲಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next